ತಿರುವನಂತಪುರ: ಮದ್ಯ, ದಕ್ಷಿಣ ಕೇರಳದ ವಿವಿಧೆಡೆ ಇಂದು ಸಹ ಸಿಡಿಲು ಸಹಿತ ಮಳೆ ಬರಲಿದೆಯೆಂದು ಕೇಂದ್ರ ಹವಾಮಾನ ಇಲಾಖೆ ವರದಿ ಮಾಡಿದೆ. ಈ ಹಿನ್ನೆಲೆಯಲ್ಲಿ ತಿರುವನಂತಪುರ, ಕೊಲ್ಲಂ, ಪತ್ತನಂತಿಟ್ಟ, ಆಲಪ್ಪುಯ, ಇಡುಕ್ಕಿ, ಕೊಟ್ಟಯಂ ಸಹಿತ 6 ಜಿಲ್ಲೆಗಳಲ್ಲಿ ಎಲ್ಲೋ ಅಲರ್ಟ್ ಘೋಷಿಸಲಾಗಿದೆ. ಶಬರಿಮಲೆ, ಪಂಪೆ, ನೀಲಯ್ಕಲ್ ಎಂಬೆಡೆಗಳಲ್ಲಿ ಇಂದು ಮೋಡ ಕವಿದ ವಾತಾವರಣವಿದ್ದು ಸಾಯಂಕಾಲ ಸಿಡಿಲು ಸಹಿತ ಮಳೆ ಬರಲಿದೆ ಎಂದು ಹವಾಮಾನ ಇಲಾಖೆ ವರದಿ ಮಾಡಿದೆ.

0 Comments