ಪತ್ತನಂತಿಟ್ಟ : ಶಬರಿಮಲೆ ಅಯ್ಯಪ್ಪ ಸ್ವಾಮಿ ದೇಗುಲದಲ್ಲಿನ ಜನದಟ್ಟಣೆ ನಿರ್ವಹಿಸುವ ನಿಟ್ಟಿನಲ್ಲಿ, ಸ್ಪಾಟ್ ಬುಕ್ಕಿಂಗ್ (ಸ್ಥಳಕ್ಕೆ ಆಗಮಿಸಿದ ಬಳಿಕ ದೇವರ ದರ್ಶನಕ್ಕೆ ಪ್ರವೇಶ) ಮಿತಿಯನ್ನು 20000ದಿಂದ 5000ಕ್ಕೆ ಇಳಿಸಲಾಗಿದೆ. ಇದರಿಂದಾಗಿ ಮುಂಗಡ ಬುಕ್ಕಿಂಗ್ ಮಾಡಿದ 70000 ಜನರಿಗೆ ಮತ್ತು ಸ್ಪಾಟ್ಬುಕ್ಕಿಂಗ್ ಅವಕಾಶ ಪಡೆದ 5000 ಜನರಿಗೆ ಮಾತ್ರ ನಿತ್ಯ ದೇವರ ದರ್ಶನಕ್ಕೆ ಅವಕಾಶ ಸಿಗಲಿದೆ.ಈ ನಿರ್ಬಂಧ ನ.24ರವರೆಗೂ ಇರಲಿದೆ. ಜೊತೆಗೆ ಸ್ಪಾಟ್ ಬುಕಿಂಗ್ ವ್ಯವಸ್ಥೆ ನಿಲಕ್ಕಲ್, ವಂದಿಪೆರಿಯಾರ್ನ ಕೇಂದ್ರಕ್ಕೆ ಸೀಮಿತಗೊಳಿಸಲಾಗಿದೆ. ಪಂಪಾ, ಎರುಮೆಲಿ, ಚೆಂಗನೂರುನಲ್ಲಿ ಅವಕಾಶ ಸ್ಥಗಿತಗೊಳಿಸಲಾಗಿದೆ.
0 Comments