Ticker

6/recent/ticker-posts

Ad Code

ಗಲ್ಫ್ ಉದ್ಯೋಗಿಯ ಮೃತದೇಹ ರೈಲು ಡಿಕ್ಕಿ ಹೊಡೆದ ಸ್ಥಿತಿಯಲ್ಲಿ ಪತ್ತೆ


 ಕುಂಬಳೆ: ಕುಂಬಳೆ ಕುಂಟಂಗೇರಡ್ಕ ನಿವಾಸಿಯಾದ ಗಲ್ಫ್ ಉದ್ಯೋಗಿಯ ಮೃತದೇಹ ಚೇರಂಗೈಯಲ್ಲಿ ರೈಲು ಡಿಕ್ಕಿ ಹೊಡೆದು ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದೆ. ಕುಂಟಂಗೇರಡ್ಕ ನಿವಾಸಿ ಮೊಹಿಯುದ್ದೀನ್ ಅವರ ಪುತ್ರ ಮುಹಮ್ಮದ್ ಅಮಾನುಲ್ಲ(61) ಮೃತಪಟ್ಟವರು. ನಿನ್ನೆ (ಸೋಮವಾರ) ರಾತ್ರಿ 8.30 ರ ವೇಳೆ ರೈಲು ಹಳಿಯಲ್ಲಿ ಮೃತದೇಹ ಪತ್ತೆಯಾಗಿದೆ. ಕಾಸರಗೋಡು ರೈಲ್ವೇ ಪೊಲೀಸರು ಆಗಮಿಸಿ ಮೃತದೇಹವನ್ನು ಜನರಲ್ ಆಸ್ಪತ್ರೆಗೆ ಸ್ಥಳಾತರಿಸಿದರು. ಗಲ್ಫ್ ಉದ್ಯೋಗಿಯಾಗಿದ್ದ ಅಮಾನುಲ್ಲ ಒಂದು ವರ್ಷದ ಹಿಂದೆ ಊರಿಗೆ ಬಂದಿದ್ದರು. ಮೃತರು ಪತ್ನಿ ರಂಲ, ಮಕ್ಕಳಾದ ಡಾ.ತಬಶಿರ, ಶಾನಿಬ,ಸಹಲ, ಅಫೀಫ ಎಂಬಿವರನ್ನು ಅಗಲಿದ್ದಾರೆ

Post a Comment

0 Comments