ಕುಂಬಳೆ: ಪುತ್ತಿಗೆ ಗ್ರಾಮ ಪಂಚಾಯತಿಯಲ್ಲಿ ಹಿಂದೆ ವಾಸಿಸುತ್ತಿದ್ದವರಿಗೆ ಮತ್ತು ವಿವಾಹವಾಗಿ ಬೇರೆಡೆ ತೆರಳಿದವರಿಗೆ ವ್ಯಾಪಕ ದ್ವಿಮತಗಳಿವೆ ಎಂಬ ದೂರು ಇದೆ. ಅಂತಹ ದ್ವಿಮತಗಳನ್ನು ತೆಗೆದುಹಾಕಲು ಲಿಖಿತ ದೂರು ಸಲ್ಲಿಸಿದರೂ, ಸಿಪಿಎಂ ಪರ ಅಧಿಕಾರಿಗಳು ಕ್ರಮ ಕೈಗೊಳ್ಳುತ್ತಿಲ್ಲ. ಮುಸ್ಲಿಂಲೀಗ್ ಪಕ್ಷ ಇದರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಿದೆ ಎಂದು ಮುಸ್ಲಿಂ ಲೀಗ್ ಪುತ್ತಿಗೆ ಪಂಚಾಯತಿ ಸಮಿತಿಯ ಪದಾಧಿಕಾರಿಗಳು ಕುಂಬಳೆಯಲ್ಲಿ ಮಂಗಳವಾರ ಸಂಜೆ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.
ವಾಸವಿಲ್ಲದ ಮತ್ತು ಮೃತರಾದ ಮತದಾರರನ್ನು ಪಟ್ಟಿಯಿಂದ ತೆಗೆದುಹಾಕುವಂತೆ ಪಂಚಾಯತಿಗೆ ಅರ್ಜಿ ಸಲ್ಲಿಸಲಾಗಿತ್ತು. ವಿಚಾರಣೆಗೆ ಹಾಜರಾಗುವ ಬದಲು, ಸಿಪಿಎಂ ಕಾರ್ಯಕರ್ತರು ದಾಖಲೆಗಳನ್ನು ಸಲ್ಲಿಸಿದರು. ಇದರ ಆಧಾರದ ಮೇಲೆ, ಅವರನ್ನು ಪಟ್ಟಿಯಲ್ಲಿ ಉಳಿಸಿಕೊಳ್ಳಲಾಗಿದೆ. ಮೂರನೇ ವಾರ್ಡ್ನ ದೇರಡ್ಕದ ವಾರ್ಡ್ ಸಂಖ್ಯೆ 1 ರಲ್ಲಿ ಸರಣಿ ಸಂಖ್ಯೆ 805 ರಲ್ಲಿರುವ ವ್ಯಕ್ತಿಗೆ ದ್ವಿಮತವಿದೆ. ಅವರು ವಿಚಾರಣೆಗೆ ಹಾಜರಾಗಿದ್ದರೂ, ಅವರು ದಾಖಲೆಗಳನ್ನು ಸಲ್ಲಿಸಲಿಲ್ಲ. ಆರೋಪ ಎತ್ತಿರುವ ವ್ಯಕ್ತಿ ಸಾಕ್ಷ್ಯಾಧಾರಗಳೊಂದಿಗೆ ದೂರು ಸಲ್ಲಿಸಿದ್ದರೂ ಸಹ ತಮ್ಮ ದ್ವಿಮತವನ್ನು ಉಳಿಸಿಕೊಂಡಿದ್ದಾರೆ. ಬದಿಯಡ್ಕ ಗ್ರಾಮ ಪಂಚಾಯತಿಯ ನಾಲ್ಕನೇ ವಾರ್ಡ್ನಲ್ಲಿ ಉರ್ಮಿಯ ಕ್ರಮ ಸಂಖ್ಯೆ 113, 116, 115, 40, 82, 83 ರ ಮತ ಸಂಖ್ಯೆಗಳು ಪುತ್ತಿಗೆ ಗ್ರಾ.ಪಂ.ಯ 146, 149, 150, 159, 276, 259 ರಲ್ಲೂ ಮತಗಳನ್ನು ಹೊಂದಿವೆ. ಇವರು ಪುತ್ತಿಗೆ ಪಂಚಾಯತ್ ವ್ಯಾಪ್ತಿಯ ನಿವಾಸಿಗಳಲ್ಲ.
ನಿಖರವಾದ ಪುರಾವೆಗಳನ್ನು ಒದಗಿಸಿದರೂ ಪಂಚಾಯತಿಯ ಕೆಲವು ಅಧಿಕಾರಿಗಳ ನೇತೃತ್ವದಲ್ಲಿ ಇಂತಹ ಅಕ್ರಮಗಳು ನಡೆದಿವೆ. ಪುತ್ತಿಗೆ ಪಂಚಾಯತಿಯಲ್ಲಿ, ಯುಡಿಎಫ್ ಗೆಲ್ಲುವ ಸಾಧ್ಯತೆಯಿರುವ ವಾರ್ಡ್ಗಳಲ್ಲಿ ವ್ಯಾಪಕವಾಗಿ ಹೆಸರನ್ನು ಅಳಿಸುವ ಕೆಲಸ ನಡೆಯುತ್ತಿದೆ. ಜೊತೆಗೆ ಬೇರೆಡೆಯ ಜನರನ್ನು ಪಟ್ಟಿಗೆ ಸೇರಿಸಲಾಗಿದೆ. ಚುನಾವಣಾ ಪ್ರಚಾರದಲ್ಲಿ ಈ ವಿಷಯವನ್ನು ಗಂಭೀರವಾಗಿ ಎತ್ತಲಾಗುವುದು ಎಮದು ಲೀಗ್ ಎಚ್ಚರಿಸಿದೆ.
ಸೈಯದ್ ಹಾದಿ ತಂಙಳ್, ಅಬ್ದುಲ್ಲ ಕಂಡತ್ತಿಲ್, ಇ.ಕೆ. ಮುಹಮ್ಮದ್ ಕುಂಞÂ್ಞ, ಇಲ್ಯಾಸ್ ಹುದವಿ, ರಫೀಕ್ ಕಣ್ಣೂರು, ಅಬ್ದುಲ್ಲ ಕೆ.ಎಂ ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

0 Comments