ಕುಂಬಳೆ: ಬಿಜೆಪಿ ಕುಂಬಳೆ ಪಂಚಾಯತು ಚುನಾವಣಾ ಕಚೇರಿ ಉದ್ಘಾಟನಾ ಸಮಾರಂಭ ನಡೆಯಿತು. ಬಿಜೆಪಿ ಜಿಲ್ಲಾ ಅಧ್ಯಕ್ಷೆ ಎಂ.ಎಲ್.ಅಶ್ವಿನಿ ಅವರು ದೀಪ ಬೆಳಗಿಸಿ ಉದ್ಘಾಟಿಸಿದರು.
ಅವರು ಮಾತನಾಡಿ ಬಿಜೆಪಿಯನ್ನು ಸೋಲಿಸಲು ಕೇರಳದಲ್ಲಿ ಎಡ- ಬಲ ರಂಗಗಳು ಒಂದಾಗುವ ದಿನ ದೂರವಿಲ್ಲ ಎಂದರು. ಬಿಜೆಪಿ ರಾಜ್ಯ ಸಮಿತಿ ಸದಸ್ಯ ವಿ.ರವೀಂದ್ರನ್ ದ್ವಜಾರೋಹಣಗೈದರು.
ಸುಜಿತ್ ರೈ ಅಧ್ಯಕ್ಷತೆ ವಹಿಸಿದರು. ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪಿ.ಆರ್.ಸುನಿಲ್, ಇತರರಾದ ಮುರಳೀಧರ ಯಾದವ್, ಸುನಿಲ್ ಅನಂತಪುರಂ, ಶಿವಪ್ರಸಾದ್ ರೈ, ದಯಾನಂದ, ಪ್ರೇಮಲತ ಎಸ್.ಮೊದಲಾದವರು ಮಾತನಾಡಿದರು.



0 Comments