ಮಂಜೇಶ್ವರ: ಕಾರು ಡಿಕ್ಕಿ ಹೊಡೆದು ಪಾದಾಚಾರಿ ವ್ಯಕ್ತಿ ಮೃತಪಟ್ಟ ಘಟನೆ ನಡೆದಿದೆ. ಮೀಯಪದವು ನಿವಾಸಿ ಹಾಗೂ ಮಂಜೇಶ್ವರ ಕೆದುಂಬಾಡಿಯಲ್ಲಿ ವಾಸಿಸುವ ಜಯಾನಂದ (48) ಮೃತಪಟ್ಟ ವ್ಯಕ್ತಿ. ಗುರುವಾರ ಸಂಜೆ 4 ಗಂಟೆಯ ವೇಳೆ ಅಫಘಾತ ಉಂಟಾಗಿದೆ. ಹೊಸಂಗಡಿಯಿಂದ ಬಸ್ಸಿನಲ್ಲಿ ಬಂದು ಮಂಜೇಶ್ವರದಲ್ಲಿಳಿದು ರಸ್ತೆ ದಾಟುತ್ತಿದ್ದಂತೆಯೇ
ಕಾಸರಗೋಡು ಭಾಗದಿಂದ ಅಮಿತ ವೇಗದಲ್ಲಿ ಬಂದ ಇನ್ನೋವ ಕಾರು ಇವರಿಗೆ ಡಿಕ್ಕಿ ಹೊಡೆದಿದೆ. ಡಿಕ್ಕಿ ಹೊಡೆದ ರಭಸಕ್ಕೆ ಗಂಭೀರ ಗಾಯಗೊಂಡ ಜಯಾನಂದರನ್ನು ಕೂಡಲೇ ಮಂಗಳೂರು ಆಸ್ಪತ್ರೆಗೆ ತಲುಪಿಸಿದರೂ ಆ ವೇಳೆ ಅವರು ಮೃತಪಟ್ಟಿದ್ದರು. ಕಾರು ಚಾಲಕನ ವಿರುದ್ದ ಮಂಜೇಶ್ವರ ಪೊಲೀಸರು ಕೇಸು ದಾಖಲಿಸಿದರು.
0 Comments