Ticker

6/recent/ticker-posts

ಮಾಣಿಲದಲ್ಲಿ ಧ.ಗ್ರಾ.ಯೋಜನೆಯ ಹೊಲಿಗೆ ತರಬೇತಿ ಸಮಾರೋಪ

 


ವಿಟ್ಲ : ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಬಿ.ಸಿ ಟ್ರಸ್ಟ್ (ರಿ.) ವಿಟ್ಲ ತಾಲೂಕಿನ ಕೇಪು ವಲಯದ ಮಾಣಿಲ  ವ್ಯವಸಾಯ ಸೇವಾ ಸಹಕಾರ ಭವನದಲ್ಲಿ  ಕಳೆದ 3  ತಿಂಗಳಿನಿಂದ ಹೊಲಿಗೆ ತರಬೇತಿಯನ್ನು ಆರಂಭಿಸಿದ್ದು  ಈ ತರಬೇತಿಯಲ್ಲಿ 20 ಮಂದಿ ಸದಸ್ಯರು ಪ್ರಯೋಜನವನ್ನು ಪಡೆದಿದ್ದು, ಬೆರಿಪದವು   ಹೊಲಿಗೆ ಕೇಂದ್ರದ ಶಿಕ್ಷಕರಾದ ಸರೋಜಿನಿ ಇವರು ತರಬೇತಿಯನ್ನು ನೀಡಿರುತ್ತಾರೆ. 

 ಹೊಲಿಗೆ ತರಬೇತಿಯ ಸಮಾರೋಪ ಕಾರ್ಯಕ್ರಮವು ಮಾಣಿಲ  ಒಕ್ಕೂಟದ ಅಧ್ಯಕ್ಷರಾದ ಕೃಷ್ಣ ಮೂಲ್ಯ  ಇವರ ಅಧ್ಯಕ್ಷತೆಯಲ್ಲಿ ನೆರವೇರಿತು. ಈ ಕಾರ್ಯಕ್ರಮದ ಉದ್ಘಾಟನೆಯನ್ನು  ಪಂಚಾಯತ್ ಅಧ್ಯಕ್ಷರಾದ  ಶ್ರೀಧರ ಬಾಳೆಕಲ್ಲು ನೇರವೇರಿಸಿದರು.ತಾಲೂಕಿನ ಯೋಜನಾಧಿಕಾರಿಯವರಾದ ರಮೇಶ್, ಪಂಚಾಯತ್ ಸದಸ್ಯರಾದ ರಾಜೇಶ್ ಬಾಳೆಕಲ್ಲು  ಶುಭ ಹಾರೈಸಿದರು.   ಈ ಕಾರ್ಯಕ್ರಮದಲ್ಲಿ  ಬೋಳಿಜಡ್ಕ  ಸಂಘದ ಸದಸ್ಯರಾದ ನವೀನ್ ಕುಮಾರ್ ರವರ ಅಣ್ಣ ರವಿಚಂದ್ರರವರಿಗೆ  ಕ್ಷೇತ್ರದಿಂದ ಮಂಜೂರಾದ  ಕ್ರಿಟಿಕಲ್ ಫಂಡ್ ನ ಮಂಜೂರಾತಿ ಪತ್ರವನ್ನು  ತಾಲ್ಲೂಕು ಯೋಜನಾಧಿಕಾರಿ ಹಸ್ತಾಂತರಿಸಿದರು. ಟ್ರೈಲರಿಂಗ್  ತರಬೇತಿ ಪಡೆದುಕೊಂಡ ಸದಸ್ಯರು ಅನಿಸಿಕೆ ವ್ಯಕ್ತಪಡಿಸಿದರು.  ಈ ಸಂಧರ್ಭ  ವಲಯ ಮೇಲ್ವಿಚಾರಕರಾದ ಜಗದೀಶ್,  ಟೈಲರಿಂಗ್  ಶಿಕ್ಷಕಿ, ಜ್ಞಾನವಿಕಾಸ ಸಮನ್ವಯಧಿಕಾರಿ ದೀಪಾ,  ಜ್ಞಾನ ವಿಕಾಸ ಕೇಂದ್ರದ ಸದಸ್ಯರು, ಒಕ್ಕೂಟದ ಸದಸ್ಯರು , ಸೇವಾಪ್ರತಿನಿಧಿ ಗುಲಾಬಿ ಉಪಸ್ಥಿತರಿದ್ದರು.ಜ್ಞಾನವಿಕಾಸ ಕೇಂದ್ರದ ಸಂಯೋಜಕಿ ಶಶಿಕಲಾ ಸ್ವಾಗತಿಸಿ ಸೇವಾ ಪ್ರತಿನಿಧಿ ಗುಲಾಬಿ ಮಾಣಿಲ ವಂದಿಸಿದರು.ಜ್ಞಾನದೀಪ ಶಿಕ್ಷಕಿ ನಳಿನಾಕ್ಷಿ ನಿರೂಪಿಸಿದರು.

Post a Comment

0 Comments