ಬದಿಯಡ್ಕ: ಇಲ್ಲಿನ ಪೇಟೆಯಲ್ಲಿ ಕೇರಳ ಲಾಟರಿಗೆ ಸಮಾನ ರೀತಿಯ ಮಡ್ಕಾ ಜುಗಾರಿಯಲ್ಲಿ ನಿರತನಾಗಿದ್ದ ಓರ್ವನನ್ನು ಪೊಲೀಸರು ಬಂಧಿಸಿದ್ದಾರೆ. ಸೂರಂಬೈಲು ನಿವಾಸಿ ರಾಜೇಶ್(39) ಬಂಧಿತ ಆರೋಪಿ. ಈತನ ಕೈಯಿಂದ 25700 ರೂ. ಹಾಗೂ ಒಂದು ಕಾರು ವಶಪಡಿಸಲಾಗಿದೆ.
ನಿನ್ನೆ (ಮಂಗಳವಾರ) ರಾತ್ರಿ 8 ಗಂಟೆಯ ವೇಳೆ ಬದಿಯಡ್ಕ ಎಸ್.ಐ.ಸುಮೇಶ್ ಬಾಬುರಿಗೆ ಲಭಿಸಿದ ಮಾಹಿತಿಯನ್ವಯ ದಾಳಿ ನಡೆದಿತ್ತು. ಬದಿಯಡ್ಕ ಬಸ್ಸು ನಿಲ್ದಾಣ ಬಳಿ ಮೊಬೈಲು ಫೋನು ಮೂಲಕ ಹಾಗೂ ಇತರ ರೀತಿಯಲ್ಲಿ ಮಡ್ಕಾ ದಂಧೆಯಲ್ಲಿ ನಿರತನಾಗಿದ್ದ ರಾಜೇಶ್ ನನ್ನು ತಡೆದು ನಿಲ್ಲಿಸಿ ವಿಚಾರಣೆ ನಡೆಸಿದಾಗ ಜೂಜಾಟದ ಮಾಹಿತಿ ಹೊರ ಬಂತು. ಈತ ಮಡ್ಕಾ ದಂಧೆಯ ಮುಖ್ಯ ಆಟಗಾರ ಎಂದು ಪೊಲೀಸರು ತಿಳಿಸಿದ್ದಾರೆ.
0 Comments