ಮುಳ್ಳೇರಿಯ: ತಂದೆ ಚಲಾಯಿಸಿದ ಕಾರು ಮಗುಚಿ ಎರಡು ವರ್ಷದ ಪುತ್ರಿ ಮೃತಪಟ್ಟ ದಾರುಣ ಘಟನೆ ನಡೆದಿದೆ. ಮುಳ್ಳೇರಿಯ ಕಾರ್ಲೆ ನಿವಾಸಿವ ಹರಿದಾಸ್- ಶ್ರೀವಿದ್ಯಾ ದಂಪತಿಯ ಪುತ್ರಿ ಹೃದ್ಯಾನಂದ (2) ಮೃತಪಟ್ಟ ಬಾಲಕಿ.
ಇಂದು (ಗುರುವಾರ) ಸಾಯಂಕಾಲ 6.30 ರ ವೇಳೆ ಕಾರ್ಲೆಯಲ್ಲಿ ಈ ಘಟನೆ ನಡೆದಿದೆ. ಹರಿದಾಸ್ ಪತ್ನಿ ಹಾಗೂ ಮಕ್ಕಳು ಕಾರಿನಲ್ಲಿ ಮುಳ್ಳೇರಿಯ ಪೇಟೆಗೆ ಹೋಗಿ ಹಿಂತಿರುಗಿ ಮನೆಯ ಬಳಿ ತಲುಪಿದಾಗ ಈ ಅಫಘಾತ ಉಂಟಾಗಿದೆ. ಪತ್ನಿ, ಮಕ್ಕಳು ಕಾರಿನ ಹೊರಗೆ ಇದ್ದರೆನ್ನಲಾಗಿದೆ.
ಇಳಿಜಾರು ರಸ್ತೆಯಲ್ಲಿ ಕಾರು ಆಫ್ ಆಗಿದ್ದು ಈ ವೇಳೆ ಪತ್ನಿ, ಮಕ್ಕಳು ಕಾರಿನ ಹತ್ತಿರ ಬಂದರು. ಆ ವೇಳೆ ಕಾರು ಇಳಿಜಾರಿನಲ್ಲಿ ಸಾಗಿ ಮಗುಚಿ ಬಿದ್ದಿದೆ. ಕಾರಿನಡಿಯಲ್ಲಿ ಸಿಲುಕಿದ ಮಗುವನ್ನು ಕೂಡಲೇ ಆಸ್ಪತ್ರೆಗೆ ತಲುಪಿಸಿದರೂ ರಕ್ಷಿಸಲಾಗಲಿಲ್ಲ. ಮೃತದೇಹವನ್ನು ಕಾಸರಗೋಡು ಜನರಲ್ ಆಸ್ಪತ್ರೆಗೆ ಕೊಂಡೊಯ್ಯಲಾಗಿದೆ. ಆದೂರು ಪೊಲೀಸರು ಸ್ಥಳಕ್ಕೆ ಆಗಮಿಸಿದ್ದಾರೆ. ಅಫಘಾತದಲ್ಲಿ ಮಗುವಿನ ತಾಯಿಗೂ ಅಕ್ಕನಿಗೂ ಸಣ್ಣ ಪುಟ್ಟ ಗಾಯಗಳಾಗಿವೆ.
0 Comments