Ticker

6/recent/ticker-posts

ನೀರ್ಚಾಲು ಬಳಿ ಬೈಕ್ ಡಿಕ್ಕಿ ಹೊಡೆದು ಲಾಟರಿ ಮಾರಾಟಗಾರ ಮೃತ್ಯು


 ಬದಿಯಡ್ಕ: ನೀರ್ಚಾಲು ಬಳಿ ಬೈಕ್ ಡಿಕ್ಕಿ ಹೊಡೆದು ಲಾಟರಿ ಮಾರಾಟಗಾರ ಮೃತಪಟ್ಟ ಘಟನೆ ನಡೆದಿದೆ. ಕಣ್ಣೂರು ಆಲಕ್ಕೋಡು ಕಾಪಿಮಲ‌ ನಿವಾಸಿ ಸಾಜು ಜಾರ್ಜ್(62) ಮೃತಪಟ್ಟ ವ್ಯಕ್ತಿ. ನಿನ್ನೆ (ಸೋಮವಾರ) ರಾತ್ರಿ 9.30 ರ ವೇಳೆ ವಿಷ್ಣುಮೂರ್ತಿ ನಗರ- ನೀರ್ಚಾಲು ಮೇಲಿನ ಪೇಟೆಯಲ್ಲಿ ಈ ಘಟನೆ ನಡೆದಿದೆ. ರಸ್ತೆ ದಾಟುತ್ತಿದ್ದಾಗ  ಬೈಕ್ ಡಿಕ್ಕಿ ಹೊಡೆದಿತ್ತು. ಗಂಭೀರ ಗಾಯಗೊಂಡ  ಸಾಜು ಜಾರ್ಜ್ ರನ್ನು ಕುಂಬಳೆಯ ಖಾಸಗಿ ಆಸ್ಪತ್ರೆಗೆ ತಲುಪಿಸಿದರೂ ಪ್ರಾಣ ಉಳಿಸಲಾಗಲಿಲ್ಲ. ಬದಿಯಡ್ಕ ಪೊಲೀಸರು ಕೇಸು ದಾಖಲಿಸಿದರು.

Post a Comment

0 Comments