Ticker

6/recent/ticker-posts

ನೆರೆ‌ಮನೆಯ ವರಾಂಡದಲ್ಲಿ ಪ್ರಜ್ಞಾಹೀನ ಸ್ಥಿತಿಯಲ್ಲಿ ಕಂಡುಬಂದ ಯುವಕ‌ ಮೃತ್ಯು


 ಅಡೂರು: ಮನೆಯಂಗಳದಲ್ಲಿ ಪ್ರಜ್ಞಾಹೀನ ಸ್ಥಿತಿಯಲ್ಲಿ ಕಂಡು ಬಂದ ಯುವಕ ಮೃತಪಟ್ಟ ಘಟನೆ ನಡೆದಿದೆ. ಅಡೂರು ಚಂದನಕ್ಕಾಡ್ ನಿವಾಸಿ ಸತೀಶನ್ ಯಾನೆ ಬಿಜು(46) ಮೃತಪಟ್ಟ ಯುವಕ. ಇವರು ನೆರೆಮನೆಯ ಚೋಮ ನಾಯ್ಕ ಎಂಬವರ ಮನೆಯ ವರಾಂಡದಲ್ಲಿ ಪ್ರಜ್ಞಾಹೀನ ಸ್ಥಿತಿಯಲ್ಲಿ ಕಂಡು ಬಂದಿದ್ದು ಕೂಡಲೇ ಕಾಸರಗೋಡು ಜನರಲ್ ಆಸ್ಪತ್ರೆಗೆ ತಲುಪಿಸಲಾಯಿತು. ಆದರೆ ಆ ವೇಳೆ ಅವರು ಮೃತಪಟ್ಟಿದ್ದರು.  ನಿನ್ನೆ (ಮಂಗಳವಾರ) ಸಾಯಂಕಾಲ 6 ಗಂಟೆಯ ವೇಳೆ ಈ ಘಟನೆ ನಡೆದಿದೆ. ಮೃತರು ತಂದೆ ಕುಞಕಣ್ಣ, ತಾಯಿ ಮಾದವಿ, ಸಹೋದರಿ ಸೌಮಿನಿ ಎಂಬಿವರನ್ನು ಅಗಲಿದ್ದಾರೆ. ಆದೂರು ಪೊಲೀಸರು ಕೇಸು ದಾಖಲಿಸಿದರು

Post a Comment

0 Comments