Ticker

6/recent/ticker-posts

ನಿವೃತ್ತ ಜಿಲ್ಲಾ ವಿದ್ಯಾಧಿಕಾರಿ ದಿನೇಶ್. ವಿ. ಡೆಂಗ್ಯೂ ಜ್ವರಕ್ಕೆ ಬಲಿ


 

ಮಂಜೇಶ್ವರ  :  ನಿವೃತ್ತ ಜಿಲ್ಲಾ ವಿದ್ಯಾಧಿಕಾರಿ ದಿನೇಶ್.ವಿ (56) ಡೆಂಗ್ಯೂ ಜ್ವರ ಬಾಧಿಸಿ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಮೃತಪಟ್ಟ ಘಟನೆ ಶೋಕ ಸಾಗರ ಸೃಷ್ಠಿಸಿದೆ. 

ಕಳೆದ ಬುಧವಾರ ಸಂಜೆ ತೀವ್ರ ಜ್ವರ ಬಾಧಿಸಿ ಕುಂಬಳೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ಡೆಂಗ್ಯೂ ಎಂದು ದೃಢಗೊಂಡ ಹಿನ್ನಲೆಯಲ್ಲಿ ಇವರನ್ನು ಮಂಗಳೂರಿನ ಖಾಸಗೀ ಆಸ್ಪತ್ರೆಯೊಂದರ ತೀವ್ರ ನಿಗಾ ವಿಭಾಗದಲ್ಲಿ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿತ್ತು.ಇಂದು (ಶುಕ್ರವಾರ) ಮಧ್ಯಾಹ್ನ ಬಳಿಕ ಚಿಕಿತ್ಸೆಗೆ ಸ್ಪಂದಿಸದೆ ನಿಧನ ಹೊಂದಿದ ಬಗ್ಗೆ ತಿಳಿದು ಬಂದಿದೆ. ಮಂಜೇಶ್ವರ ತಾಲೂಕಿನ ಕುಂಜತ್ತೂರು ಶಾಲೆ ಅಸುಪಾಸಿನ ಸರಕಾರಿ ಶಾಲೆಗಳಲ್ಲಿ ಅಧ್ಯಾಪಕರಾಗಿ ಸೇವೆ ಸಲ್ಲಿಸಿ ಬಂಗ್ರಮಂಜೇಶ್ವರ ಶಾಲೆಯಲ್ಲಿ ಮುಖ್ಯೋಪಾಧ್ಯಾಯರಾಗಿ ಭಡ್ತಿ ಹೊಂದಿ ಸೇವೆ ಸಲ್ಲಿಸಿದ್ದರು,ಶಿಕ್ಷಣ ಇಲಾಖೆಯ ಬಿಪಿಸಿ ಆಗಿಯೂ ಭೌತಿಕ ವಿಜ್ಞಾನ ತರಬೇತಿನ ಸಂಪನ್ಮೂಲ ವ್ಯಕ್ತಿಯಾಗಿ ಜನಪ್ರಿಯರಾಗಿದ್ದರು. ಮಂಜೇಶ್ವರ ಉಪಜಿಲ್ಲಾ ಶಿಕ್ಷಣಾಧಿಕಾರಿಯಾಗಿ  ಆರೇಳು ವರ್ಷಗಳ ಕಾಲ ಸೇವೆ ಸಲ್ಲಿಸಿದ ಇವರು ಸಾರ್ವಜನಿಕ ಶಿಕ್ಷಣ ನಿರ್ದೇಶನಾಲಯದಲ್ಲೂ ಸೇವೆ ಸಲ್ಲಿಸಿದ್ದರು. ಕಾಸರಗೋಡು ಜಿಲ್ಲಾ ಶಿಕ್ಷಣಾಧಿಕಾರಿಯಾಗಿ ಜನಾನುರಾಗಿಯಾಗಿದ್ದ ಇವರು ಸರಳತೆ ಮತ್ತು ನಿಖರ ಕರ್ತವ್ಯ ಬದ್ಧತೆಯನ್ನು ಮೈಗೂಡಿಸಿಕೊಂಡಿದ್ದ ಆದರ್ಶರಾಗಿದ್ದರು.

ಪಠ್ಯೇತರವಾಗಿ ರಂಗ ಕಲೆ, ಇನ್ನಿತರ ಶೈಕ್ಷಣಿಕ ತರಬೇತಿಗಳಿಗೆ ಸದಾ ಪ್ರೋತ್ಸಾಹದಾಯಕರಾಗಿದ್ದ ಕನ್ನಡ ಶಿಕ್ಷಣಾಧಿಕಾರಿಯಾಗಿ ಗುರುತಿಸಿಕೊಂಡಿದ್ದರು. ಕಳೆದ ಮೇ.31 ರಂದು ತನ್ನ ವೃತ್ತಿ‌ ಬದುಕಿನಿಂದ ವಿರಮಿಸಿದ್ದ ಇವರು ಪತ್ನಿ ಇರ್ವರು ಪುತ್ರಿ ಹಾಗೂ ಒರ್ವ ಪುತ್ರನನ್ನು ಅಪಾರ ಬಂಧು ಬಳಗವನ್ನಗಲಿದ್ದಾರೆ. ಇವರ ನಿಧನಕ್ಕೆ ಸಾರ್ವತ್ರಿಕ ಸಂತಾಪ ವ್ಯಕ್ತವಾಗುತ್ತಿದೆ.

Post a Comment

1 Comments

  1. ದಿನೇಶ್ ಸರ್ ರವರ ನಿವೃತ್ಥ ಜೀವಿತಾವಧಿಯಲ್ಲಿಯೂ ಸಮಾಜಕ್ಕೆ ಬಹಳಷ್ಟು ಸೇವೆ ಅಗತ್ಯವಿತ್ತು. ಆದರೆ ವಿಧಿ ಬೇರೆಯೇ ಸಂಕಲ್ಪಿಸಿತು.. ಶ್ರದ್ಧಾಂಜಲಿ.. ಬೇರೇನು ಹೇಳಲಿ....

    ReplyDelete