Ticker

6/recent/ticker-posts

ಲಹರಿ ವಸ್ತು‌ ಮಾರಾಟ ಸಂಘಗಳೊಳಗಿನ ಹಗೆತನ, ಪತ್ನಿಯ‌ ಕಣ್ಮುಂದೆಯೇ ಯುವಕನನ್ನು ಇರಿದು ಕೊಲೆಗೈದ ತಂಡ


 ಮಾದಕವಸ್ತು ಮಾರಾಟ ಸಂಘವು ಯುವಕನನ್ನು ‌ಪತ್ನಿಯ ಕಣ್ಮುಂದೆಯೇ ಇರಿದು ಕೊಲೆಗೈದ ಘಟನೆ ನಡೆದಿದೆ. ತ್ರಿಶೂರು, ಕುನ್ನಂಕುಳಂ ಪೆರುಂಬಿಲಾವ್‌ ನಿವಾಸಿ, ಹಲವು ‌ಪ್ರಕರಣಗಳಲ್ಲಿ ಆರೋಪಿಯಾಗಿರುವ ಅಕ್ಷಯ್(27) ಮೃತಪಟ್ಟ ವ್ಯಕ್ತಿ. ಶುಕ್ರವಾರ ರಾತ್ರಿ 8.30 ರ ವೇಳೆ ಈ ಘಟನೆ ‌ನಡೆದಿದೆ.

    ಅಕ್ಷಯ್ ಹಾಗೂ ಪತ್ನಿ ಮನೆಗೆ ಬಂದಾಗ ಲಿಶೋಯ್, ಬಾದುಷ ಎಂಬಿವರ ನೇತೃತ್ವದ ತಂಡ ದಾಳಿ ನಡೆಸಿದೆ. ಈ ವೇಳೆ ಅಕ್ಷಯ್ ನ ಪತ್ನಿ ಓಡಿ ಸಮೀಪದ ಮನೆಯಲ್ಲಿ ತಿಳಿಸಿದ್ದು ಈ ವೇಳೆ ಊರವರು ಒಟ್ಟು ಸೇರಿ ಬಂದಾಗ ಆರೋಪಿಗಳು ಓಡಿ ಪರಾರಿಯಾದರು. ಸ್ಥಳೀಯ ನಾಗರುಕರು ಅಕ್ಷಯ್ ನನ್ನು ಆಸ್ಪತ್ರೆಗೆ ಸಾಗಿಸಿದರೂ ಆತ ಮೃತಪಟ್ಟಿದ್ದನು. ಅಕ್ಷಯ್ ನಿಗೆ ಇರಿದ ಬಾದುಷನಿಗೂ ಗಾಯಗಳಾಗಿದ್ದು ಆತನನ್ನು ಸಹ ಆಸ್ಪತ್ರೆಗೆ ದಾಖಲಿಸಲಾಗಿದೆ

Post a Comment

0 Comments