Ticker

6/recent/ticker-posts

ಜೂ 27ಕ್ಕೆ ಕಾಸರಗೋಡು ಕನ್ನಡ ಭವನ ಮತ್ತು ಗ್ರಂಥಾಲಯ ವಾಚನ ವಾರಾಚರಣೆಯ ಸಮಾರೋಪ

 


ಕಾಸರಗೋಡು :ಸೀತಮ್ಮ ಪುರುಷ ನಾಯಕ ಸ್ಮಾರಕ ಕನ್ನಡ ಭವನ ಮತ್ತು ಗ್ರಂಥಾಲಯ,ಬಾಲ ಭವನ್ ವಿದ್ಯಾಕೇಂದ್ರ  ಕಾಸರಗೋಡು,ಶ್ರೀ ವೆಂಕಟ್ರಮಣಸ್ವಾಮಿ ಕೃಪಾಶ್ರಿತ ಯಕ್ಷಗಾನ ಸಂಶೋಧನಾ, ತರಬೇತಿ ಕೇಂದ್ರ ಕಾಸರಗೋಡು ಸಂಯುಕ್ತ ಆಶ್ರಯದಲ್ಲಿ“ವಾಚನ ವಾರಾಚರಣೆಸಮಾರಂಭ ” ಜೂ.27ಕ್ಕೆ ಬೆಳಿಗ್ಗೆ 10 ಗಂಟೆಗೆ ನುಳ್ಳಿಪ್ಪಾಡಿ ಕನ್ನಡ ಭವನ ಮತ್ತು ಗ್ರಂಥಾಲಯ ಸಭಾಂಗಣದಲ್ಲಿ ಜರಗಲಿದೆ. ಬಾಲ ಭವನ್ ವಿದ್ಯಾಕೇಂದ್ರದ ಎಕಾಡೆಮಿಕಲ್ ಎಡ್ವೆಸರ್ ಡಾ| ಕೆ.ಎನ್. ವೆಂಕಟ್ರಮಣ ಹೊಳ್ಳ  ಕಾರ್ಯಕ್ರಮ ಉದ್ಘಾಟಿಸುವರು. ಕನ್ನಡ ಭವನ ಮತ್ತು ಗ್ರಂಥಾಲಯದ ಸಂಸ್ಥಾಪಕ ಡಾ| ವಾಮನ್ ರಾವ್ ಬೇಕಲ್ ಅಧ್ಯಕ್ಷತೆವಹಿಸುವರು.

ಬಾಲ ಭವನ್ ವಿದ್ಯಾಕೇಂದ್ರದ ಮುಖ್ಯೋಪಾದ್ಯಾಯಿನಿ ಲೀಲಾವತಿ ನಾಯರ್,ಅಧ್ಯಾಪಿಕೆ ಜಯಂತಿ ಟೀಚರ್,ಶಿಕ್ಷಕ ಮತ್ತು ರಕ್ಷಕ ಸಂಘದ ಅಧ್ಯಕ್ಷ ಗುರುದತ್ತ್ ಪೈ  ಉಪಸ್ಥಿತರಿರುವರು. ಸಂಕೀರ್ತನ ಸಾಮ್ರಾಟ್ ಶ್ರೀ ಜಯಾನಂದ ಕುಮಾರ್ ಹೊಸದುರ್ಗ,ಹಿರಿಯ ಪತ್ರಕರ್ತ ಪ್ರದೀಪ್ ಬೇಕಲ್, ಪತ್ರಕರ್ತ,ರಂಗ ಕಲಾವಿದ, ಶ್ರೇಷ್ಠ ಬಹುಭಾಷಾ ನಿರೂಪಕ ಜಯ ಮಣಿಯಂಪಾರೆ,ಕನ್ನಡ ಭವನ ಪ್ರಕಾಶನದ  ಸಂಧ್ಯಾರಾಣಿ ಟೀಚರ್ ಸಂಪನ್ಮೂಲ ವ್ಯಕ್ತಿಗಳಾಗಿರುವರು.

ಈ ಸಂದರ್ಭದಲ್ಲಿ ಗ್ರಂಥಾಲಯ, ವಾಚನಾಲಯಗಳ ಪ್ರಸಕ್ತಿ, ಪುಸ್ತಕಗಳ ಅನಿವಾರ್ಯತೆ, ಓದಿನ ಮಹತ್ವ, ಕವಿತಾ ರಚನೆ, ವರದಿ ತಯಾರಿಕೆ, ಸಂಕೀರ್ತನೆ, ಯಕ್ಷಗಾನ, ನಾಟಕ, ಕಲೆ, ಚಾರಿತ್ರಿಕ ಅಧ್ಯಯನದ ಪ್ರಯೋಜನ, ಮರೆಯಾದ ಮಹಾನ್ ಚೇತನಗಳ ಜೀವನ ಚರಿತ್ರೆ ಅಧ್ಯಯನದಿಂದ ಪ್ರಯೋಜನ ಮುಂತಾದ ವ್ಯಕ್ತಿತ್ವ ರೂಪೀಕರಣ, ವಿಕಾಸದ ಬಗ್ಗೆ ವಿದ್ಯಾರ್ಥಿಗಳಿಗೆ ತರಗತಿ ನಡೆಯಲಿದೆ.‌    ಬಾಲ ಭವನದ ಸುಮಾರು 40 ಮಂದಿ ವಿದ್ಯಾರ್ಥಿಗಳು ಭಾಗವಹಿಸುವ “ಪುಸ್ತಕಗಳೊಂದಿಗೆ ಸಂವಾದ” ಕಾರ್ಯಕ್ರಮವನ್ನು ಕನ್ನಡ ಭವನ ಗ್ರಂಥಾಲಯದ ಕಾರ್ಯದರ್ಶಿ ಕಲಾವಿದ ವಸಂತ್ ಕೆರೆಮನೆ ನಿರ್ವಹಿಸುವರು,

ಭಾಗವಹಿಸುವ ವಿಧ್ಯಾರ್ಥಿಗಳಿಗೆ ಅಭಿನಂದನಾ ಪ್ರಮಾಣ ಪತ್ರವನ್ನು ನೀಡಿ ಗೌರವಿಸಲಾಗುವುದು ಎಂದು ಸಂಬಂಧಪಟ್ಟವರು ತಿಳಿಸಿದ್ದಾರೆ.

Post a Comment

0 Comments