ತಿರುವನಂತಪುರಂ: ಇಂದು (ಗುರುವಾರ) ಸಹ ರಾಜ್ಯದ ವಿವಿದೆಡೆ ಭಾರೀ ಪ್ರಮಾಣದ ಮಳೆ ಬರಲಿದೆಯೆಂದು ಕೇಂದ್ರ ಹವಾಮಾನ ಇಲಾಖೆ ವರದಿ ಮಾಡಿದೆ.
ಈ ಹಿನ್ನೆಲೆಯಲ್ಲಿ ರಾಜ್ಯದ ಮೂರು ಜಿಲ್ಲೆಗಳಲ್ಲಿ ಹಾಗೂ ಎರಡು ತಾಲೂಕುಗಳಲ್ಲಿ ಶಿಕ್ಷಣ ಕೇಂದ್ರಗಳಿಗೆ ರಜೆ ಸಾರಲಾಗಿದೆ. ಈಗಾಗಲೇ ಆರೆಂಜ್ ಅಲರ್ಟ್ ಘೋಷಿಸಿರುವ ಇಡುಕ್ಕಿ, ವಯನಾಡ್, ತ್ರಿಶೂರ್ ಜಿಲ್ಲೆಗಳಲ್ಲಿ ಹಾಗೂ ಕೋದಮಂಗಲಂ, ಎರ್ನಾಕುಲಂ ತಾಲೂಕುಗಳಲ್ಲಿ ಶಾಲೆಗಳಿಗೆ ರಜೆ ಸಾರಲಾಗಿದೆ. ಕಾಸರಗೋಡು, ಕಣ್ಣೂರು ಸಹಿತ 8 ಜಿಲ್ಲೆಗಳಲ್ಲಿ ಎಲ್ಲೊ ಅಲರ್ಟ್ ಘೋಷಿಸಲಾಗಿದೆ. ಸಮುದ್ರದಲ್ಲಿ ದೈತ್ಯ ಅಲೆ ಉಂಟಾಗಲಿದ್ದು ಕರಾವಳಿ ಪ್ರದೇಶದ ಜನರು ಎಚ್ಚರ ವಹಿಸುವಂತೆ ತಿಳಿಸಲಾಗಿದೆ. ಮಳೆಯ ಜತೆಗೆ ಬಿರುಗಾಳಿಯೂ ಇರಲಿದೆ
0 Comments