ಎಡನೀರು: ವಿದ್ಯಾನಗರ ಪೊಲೀಸ್ ಠಾಣಾ ವ್ಯಾಪ್ತಿಯ ಎಡನೀರು ಕಳೇರಿಯಲ್ಲಿ ಧಾರ್ಮಿಕ ಕಾರ್ಯಕ್ರಮದ ಅಂಗವಾಗಿ ಸ್ಥಾಪಿಸಲಾಗಿದ್ದ ಓಂಕಾರ ದ್ವಜ ಹಾಗೂ ತೋರಣಗಳನ್ನು ಯಾವುದೇ ಮುನ್ಸೂಚನೆ ನೀಡದೆ ತೆರವುಗೊಳಿಸಿದ್ದ ವಿದ್ಯಾನಗರ ಪೊಲೀಸರ ಪಕ್ಷಪಾತ ಧೋರಣೆಯನ್ನು ವಿಶ್ವಹಿಂದೂ ಪರಿಷತ್ (ವಿಎಚ್ಪಿ) ತೀವ್ರವಾಗಿ ಖಂಡಿಸಿದೆ . ಆದರೆ ಇದೇ ಪ್ರದೇಶದಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ವಾಹನ ಸಂಚಾರಕ್ಕೆ ಅಡ್ಡಿಯಾಗುವಂತೆ ವರ್ಷಗಳಿಂದ ನೆಲೆಸಿರುವ ಸಿಪಿಐಎಂ ಪಕ್ಷದ ಧ್ವಜ ಹಾಗೂ ತೋರಣಗಳನ್ನು ಕಂಡು ಕಾಣದಂತೆ ವರ್ತಿಸುತ್ತಿರುವ ಪೊಲೀಸ್ ಇಲಾಖೆ ಸಿಪಿಎಂ ಪಕ್ಷದ ಅಜ್ಞಾನವರ್ತಿಯಾಗಿ ಕಾರ್ಯಾಚರಿಸುತ್ತಿದೆ ಎಂದು ಸಂಘಟನೆಯು ಆರೋಪಿಸಿದೆ.
ಸಿ ಪಿಎಂ ನ ಕೇಂದ್ರಗಳಲ್ಲಿ ಹಿಂದೂ ಧಾರ್ಮಿಕ ಆಚರಣೆಗಳು ಹಾಗೂ ಧಾರ್ಮಿಕ ಚಿಹ್ನೆಗಳೂ ಸೇರಿದಂತೆ ಇತರ ಸಾಂಸ್ಕೃತಿಕ ಅಥವಾ ಬೇರೆ ಸಿದ್ಧಾಂತಗಳ ಚಟುವಟಿಕೆಗಳನ್ನು ನಡೆಸ ಕೂಡದೆಂಬ ಪ್ರಜಾಪ್ರಭುತ್ವ ವಿರೋಧಿ ಸಿ ಪಿ ಎಂ ನಿಲುವಿಗೆ ಪೊಲೀಸರು ಕೂಡ ಬೆಂಬಲ ನೀಡುತ್ತಿರುವುದು ಬೇಲಿಯೇ ಎದ್ದು ಹೊಲ ಮೇದಂತೆ ಎಂಬ ಗಾದೆ ಮಾತಿಗೆ ಅನ್ವಯವಾಗುತ್ತಿದೆ. ಆಡಳಿತದ ಅಹಂಕಾರದಲ್ಲಿ ಪೊಲೀಸರನ್ನು ಉಪಯೋಗಿಸಿಕೊಂಡು ವೃದ್ಧರು ಮಾತ್ರ ವಾಸಿಸುವ ಮನೆಗಳಿಗೆ ನುಗ್ಗಿ ಅವರಿಗೆ ಮಾನಸಿಕವಾಗಿ ತೊಂದರೆ ಕೊಡುದು , ಹೊರ ರಾಜ್ಯದಲ್ಲಿ ದುಡಿಯುತ್ತಿರುವ ಯುವಕರಿಗೆ ಬೆದರಿಕೆಯನ್ನೋಡ್ಡುವಂತಹ ಕಮಿನಿಸ್ಟ್ ಪಕ್ಷದ ನೇತಾರರು ಈ ಹೀನ ಕೃತ್ಯದಿಂದ ಹಿಂಜರಿಯದಿದ್ದರೆ ಇದನ್ನು ಪ್ರಜಾಪ್ರಭುತ್ವ ರೀತಿಯಲ್ಲಿ ಎದುರಿಸಲು ವಿಶ್ವ ಹಿಂದೂ ಪರಿಷತ್ ತಯಾರಾಗಬೇಕಾಗಿತೆಂದು ಮುನ್ನೆಚ್ಚರಿಕೆಯನ್ನು ನೀಡಿದೆ
ಇದೇ ರೀತಿ ಪಕ್ಷಪಾತ ದೋರಣೆಯನ್ನು ಪೊಲೀಸರು ಮುಂದುವರೆಸಿದರೆ, ಭಾರೀ ಪ್ರತಿಭಟನೆಯನ್ನು ನಡೆಸಲು ವಿಎಚ್ಪಿ ಮುಂದಾಗುತ್ತದೆ ಎಂದು ಪತ್ರಿಕಾ ಪ್ರಕಟಣೆಯಲ್ಲಿ ಎಚ್ಚರಿಸಲಾಗಿದೆ.
0 Comments