ಮಂಜೇಶ್ವರ: ಮನೆಯಲ್ಲಿ ಮಲಗಿದ ತಾಯಿಗೆ ಬೆಂಕಿ ಹಚ್ಚಿ ಆಕೆಯನ್ನು ಕೊಲೆಗೈದು, ನೆರೆಮನೆಯ ಮಹಿಳೆಯನ್ನು ಗಾಯಗೊಳಿಸಿದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ವಾರ್ಕಾಡಿ ನಲ್ಲಂಗಿ ನಿವಾಸಿ ದಿವಂಗತ ಲೂಯಿಸ್ ಮೊಂತೇರೊ ಅವರ ಪುತ್ರ ಮೆಲ್ವಿನ್ ಮೊಂತೆರೊ(33) ಬಂಧಿತ ಆರೋಪಿ.
ಇಂದು (ಗುರುವಾರ) ಮದ್ಗಾಹ್ನ ಘಟನೆ ನಡೆದ ಸ್ಥಳದಿಂದ 200 ಮೀಟರ್ ದೂರವಿರುವ ಕರ್ಣಾಟಕ ಪ್ರದೇಶದಿಂದ ಆರೋಪಿಯನ್ನು ಬಂಧಿಸಲಾಗಿದೆ. ಘಟನೆ ನಡರದ ನಂತರ ಈತ ಬಸ್ಸು ಹತ್ತಿ ಕರ್ಣಾಟಕ ಭಾಗಕ್ಕೆ ಪರಾರಿಯಾಗಿದ್ದನು.
ಮನೆಯಲ್ಲಿ ಮಲಗಿದ ತಾಯಿ ಹಿಲ್ಲಾ(60) ರನ್ನು ಈತ ಕಿಚ್ಚಿಕ್ಲಿ ಕೊಲೆಗೈದಿದ್ದನು. ಅನಂತರ ನೆರೆಮನೆಯ ಲೋಲಿತ (33) ಎಂಬವರನ್ನು ಕರೆದು ಆಕೆಗೂ ಗಾಯಗೊಳಿಸಿದ್ದನು.
ಈ ಘಟನೆಯಿಂದ ತಾಯಿ ಸಾವನ್ನಪ್ಪಿದ್ದು ಗಂಭೀರ ಗಾಯಗೊಂಡಿರುವ ನ ಲೋಲಿತ ಆಸ್ಪತ್ರೆಗೆ ದಾಖಲಾಗಿದ್ದಾರೆ. . ಇಂದು (ಗುರುವಾರ) ಮುಂಜಾನೆ ಈ ಘಟನೆ ನಡೆದಿದ್ದು, ಪುತ್ರ ಮೇಲ್ವಿನ್ ಮೊಂತೇರೋ (33) ಈ ಕೃತ್ಯವೆಸಗಿ ಪರಾರಿಯಾಗಿದ್ದನು. ತಡರಾತ್ರಿ ತಾಯಿಗೆ ಬೆಂಕಿ ಹಚ್ಚಿದ ಬಳಿಕ, ನೆರೆಮನೆಯ ಮಹಿಳೆಯನ್ನು ತಾಯಿಗೆ ಹುಷಾರಿಲ್ಲವೆಂದು ಮನೆಗೆ ಕರೆದ ಬಳಿಕ ಆಕೆಗೂ ಬೆಂಕಿ ಹಚ್ಚಿದ್ದಾನೆ. ತಾಯಿ ಮೃತ ದೇಹ ಮನೆಯ ಹಿಂಭಾಗದ ಪೊದರುಗಳಡೆಯಲ್ಲಿ ದೊರೆತಿದೆ. ಮನೆಯಲ್ಲಿ ತಾಯಿ ಮತ್ತು ಮಗ ಮಾತ್ರವೇ ವಾಸಿಸುತ್ತಿದ್ದು, ಇನ್ನೋರ್ವ ಮಗ ಅಲ್ವಿನ್ ಮೊಂತೇರೋ ಕೊಲ್ಲಿ ರಾಷ್ಟ್ರದಲ್ಲಿದ್ದಾನೆ. ಆರೋಪಿ ಮೇಲ್ವಿನ್ ಕಟ್ಟಡ ಕಾರ್ಮಿಕನಾಗಿದ್ದು, ಕೊಲೆ ಕೃತ್ಯಕ್ಕೆ ಕಾರಣವೇನೆಂಬುದು ತಿಳಿದು ಬಂದಿಲ್ಲ. ಮಂಜೇಶ್ವರ ಪೊಲೀಸರು ಆರೋಪಿಯ ವಿಚಾರಣೆ ನಡೆಸುತ್ತಿದ್ದಾರೆ
0 Comments