Ticker

6/recent/ticker-posts

ಕಾಲು ಜಾರಿ ಬಿದ್ದು ಗಂಭೀರ ಗಾಯಗೊಂಡು ಮಂಗಳೂರು ಆಸ್ಪತ್ರೆಯಲ್ಲಿ ದಾಖಲಾಗಿದ್ದ ಕೃಷಿಕ ಮೃತ್ಯು


 ಉಪ್ಪಳ: ಹಟ್ಟಿಗೆ ನಡೆದುಕೊಂಡು ಹೋಗುತ್ತಿದ್ದ ವೇಳೆ ಕಾಲು ಜಾರಿ ಬಿದ್ದು ಗಂಭೀರ ಗಾಯಗೊಂಡು ಮಂಗಳೂರು ಆಸ್ಪತ್ರೆಯಲ್ಲಿ ದಾಖಲಾಗಿದ್ದ ಕೃಷಿಕ ಮೃತಪಟ್ಟಿದ್ದಾರೆ. ಉಪ್ಪಳ ಮುಳಿಂಜ ಪುಂಡುಪ್ಪುರಿ ನಿವಾಸಿ ಕೊರಗಪ್ಪ ಶೆಟ್ಟಿ(69) ಮೃತಪಟ್ಟ ವ್ಯಕ್ತಿ. ಸೋಮವಾರ ಭಾರೀ ಮಳೆಯ ವೇಳೆ ಇವರು ಮನೆಯ ಬಳಿಯ ಹಟ್ಟಿಗೆ ನಡೆದುಕೊಂಡು ಹೋಗುತ್ತಿದ್ದಾಗ ಕಾಲು ಜಾರಿ ಬಿದ್ದರೆನ್ನಲಾಗಿದೆ. ಕೂಡಲೇ ಅವರನ್ನು ಮಂಗಳೂರು ಆಸ್ಪತ್ರೆಗೆ ಕೊಂಡೊಯ್ದು ಚಿಕಿತ್ಸೆ ನೀಡಲಾಯಿತು. ಆದರೆ ಚಿಕಿತ್ಯ ಫಲಾಕಾರಿಯಾಗದ ಹಿನ್ನೆಲೆಯಲ್ಲಿ ಅವರು ಕೊನೆಯುಸಿರೆಳೆದರು. ಮೃತರು ಪತ್ನಿ ಜಾನಕಿ ಶೆಟ್ಟಿ, ಮಕ್ಕಳಾದ ಶಾಂಭವಿ ಶೆಟ್ಟಿ, ಋಷಿತ್ ಶೆಟ್ಟಿ, ಅಳಿಯ ಪ್ರವೀಣ್ ಶೆಟ್ಟಿ, ಸೊಸೆ ಮೋನಿಶ, ಸಹೋದರ ಸಹೋದರಿಯರಾದ  ವಿಶ್ವನಾಥ ಶೆಟ್ಟಿ, ಚಂದ್ರಾವತಿ, ಸಾವಿತ್ತಿ ಎಂಬಿವರನ್ನು ಅಗಲಿದ್ದಾರೆ. ಇವರ ಓರ್ವ ಸಹೋದರಿ ಕುಸುಮ ಈ ಹಿಂದೆಯೇ ನಿಧನರಾಗಿದ್ದರು

Post a Comment

0 Comments