Ticker

6/recent/ticker-posts

ಪೆರಡಾಲ ಕ್ಷೇತ್ರದಲ್ಲಿ ಶಕ್ತಿ ಪಂಚಾಕ್ಷರಿ ಯಾಗ ಆಮಂತ್ರಣ ಪತ್ರಿಕೆ ಬಿಡುಗಡೆ


 ಬದಿಯಡ್ಕ: ಪೆರಡಾಲ ಗ್ರಾಮದ ಅಧಿಪತಿ ಪೆರಡಾಲ ಶ್ರೀ ಉದನೇಶ್ವರ ಕ್ಷೇತ್ರದ ಜೀರ್ಣೋದ್ಧಾರ ಕಾರ್ಯಗಳು ಅಂತಿಮ ಹಂತ ತಲಪುತ್ತಿದೆ. ಈ ಸಂದರ್ಭದಲ್ಲಿ ಕ್ಷೇತ್ರದ ಸಾನಿಧ್ಯವೃದ್ಧಿ, ಸಮಾಜದ ಐಕ್ಯತೆ ,ಉನ್ನತಿ ಮತ್ತು ಲೋಕಕಲ್ಯಾಣದ ಉದ್ದೇಶದಿಂದ ಆಗಸ್ಟ್ 17 ಭಾನುವಾರದಂದು ಶಕ್ತಿ ಪಂಚಾಕ್ಷರಿ ಯಾಗ. ನಡೆಸಲು ಸಿದ್ಧತೆ ಕೈಗೊಳ್ಳಲಾಗಿದೆ.

ಇದರ ಆಮಂತ್ರಣ ಪತ್ರಿಕೆ ಬಿಡುಗಡೆ ಸಮಾರಂಭ ಕ್ಷೇತ್ರದಲ್ಲಿ ಜರಗಿತು.

ಆಡಳಿತ ಮೊಕ್ತೇಸರ ವೆಂಕಟರಮಣ ಭಟ್ ಚಂಬಲ್ತಿ ಮಾರ್, ಮೊಕ್ತೇಸರರಾದ ಪಿ.ಜಿ ಜಗನ್ನಾಥ ರೈ, ಸೀತಾರಾಮ ನವಕ್ಕಾನ, ಕೃಷ್ಣ ಬದಿಯಡ್ಕ, ಮಾಜಿ ಆಡಳಿತ ಮೊಕ್ತೇಸರ ಟಿ. ಕೆ. ನಾರಾಯಣ ಭಟ್ ಪಂಜಿತಡ್ಕ, ಪಿ. ಜಿ ಚಂದ್ರಹಾಸ ರೈ, ಸೇವಾ ಸಮಿತಿ ಕಾರ್ಯದರ್ಶಿ ನಿರಂಜನ್ ರೈ ಪೆರಡಾಲ, ಜೀರ್ಣೋದ್ಧಾರ. ಸಮಿತಿ ಕೋಶಾಧಿಕಾರಿ ಸೂರ್ಯನಾರಾಯಣ ಬಿ., ಜೀರ್ಣೋದ್ಧಾರ ಸಮಿತಿ ಪದಾಧಿಕಾರಿಗಳಾದ ಶ್ರೀಶ ಕುಮಾರ್ ಪಂಜಿ ತಡ್ಕ, ಗಣೇಶ ಪ್ರಸಾದ್ ಕಡ್ಡಪ್ಪು, ಜಗನ್ನಾಥ ರೈ ಕೊರೆಕ್ನಾನ , ಭಾಸ್ಕರ ಪಂಜಿತಡ್ಕ, ಸತೀಶ್ ಪುದ್ಯೋಡು, ಜಗದೀಶ್ ಪೆರಡಾಲ, ಮಾತೃ ಸಮಿತಿ ಪದಾಧಿಕಾರಿಗಳು ಸಂಘ ಸಂಸ್ಥೆ ಪದಾಧಿಕಾರಿಗಳು ಸದಸ್ಯರು ಭಕ್ತರು ಅರ್ಚಕ ವೃಂದ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.

ಆ.17ರಂದು ಬೆಳಿಗ್ಗೆ 9ಕ್ಕೆ ಯಾಗ ಆರಂಭ , 11:30 ಕ್ಕೆ ಪೂರ್ಣಾಹುತಿ, ನಂತರ ಧಾರ್ಮಿಕ ಸಭೆ, 12:30ಕ್ಕೆ ಮಹಾಪೂಜೆ , ಪ್ರಸಾದ ವಿತರಣೆ ಪ್ರಸಾದ ಭೋಜನ ನಡೆಯಲಿದೆ.

Post a Comment

0 Comments