Ticker

6/recent/ticker-posts

ಎಡನೀರು ಶ್ರೀಗಳ ಚಾತುರ್ಮಾಸ್ಯಕ್ಕೆ ಕಾಸರಗೋಡು ವಲಯ ಸಮಿತಿಯ ಹೊರೆ ಕಾಣಿಕೆ ಸಮರ್ಪಣೆ


ಕಾಸರಗೋಡು : ಶ್ರೀಮದ್ ಎಡನೀರು ಮಠಾಧೀಶರಾದ ಶ್ರೀ ಶ್ರೀ ಸಚ್ಚಿದಾನಂದ ಭಾರತೀ ಶ್ರೀಪಾದಂಗಳವರ 5 ನೇ ಚಾತುರ್ಮಾಸ್ಯ ವ್ರತಾಚರಣೆ ಅಂಗವಾಗಿ ಕಾಸರಗೋಡು ವಲಯ ಸಮಿತಿಯ ವತಿಯಿಂದ ಭಕ್ತರು ಹೊರೆಕಾಣಿಕೆ ಸಮರ್ಪಿಸಿ ಕೃತಾರ್ಥರಾದರು.  ಕಾಸರಗೋಡು ಪೇಟೆ ಶ್ರೀ ವೆಂಕಟರಮಣ ದೇವಸ್ಥಾನದಿಂದ ಹಸಿರುವಾಣಿ ಹೊರೆಕಾಣಿಕೆ ಪ್ರಾರಂಭಗೊಂಡು ಎಡನೀರು ಮಠಕ್ಕೆ ಸಮರ್ಪಿಸಲಾಯಿತು. ಈ  ಸಂದರ್ಭದಲ್ಲಿ  ಕಾಸರಗೋಡು ವಲಯ ಸಮಿತಿ ರಕ್ಷಾಧಿಕಾರಿಯಾದ ಬ್ರಹ್ಮಶ್ರೀ ಉಳಿಯತ್ತಾಯ ವಿಷ್ಣು ಅಸ್ರ, ಅಧ್ಯಕ್ಷರಾದ ಡಾl ಕೆ.ಎನ್. ವೆಂಕಟ್ರಮಣ ಹೊಳ್ಳ, ಉಪಾಧ್ಯಕ್ಷರುಗಳಾದ ಕೆ.ಎನ್ ರಾಮಕೃಷ್ಣ ಹೊಳ್ಳ, ಪ್ರಧಾನ ಕಾರ್ಯದರ್ಶಿಯಾದ ಕೆ. ಜಗದೀಶ್ ಕೂಡ್ಲು, ಕಾರ್ಯದರ್ಶಿಗಳಾದ ಕಿಶೋರ್ ಕುಮಾರ್, ಕೆ.ವಿ.ತಿರುಮಲೇಶ ಹೊಳ್ಳ, ಕೆ.ವಿ.ಶೇಷಾದ್ರಿ ಹೊಳ್ಳ ಕೋಶಾಧಿಕಾರಿಯಾದ ಗುರುಪ್ರಸಾದ್ ಕೋಟೆಕಣಿ,ಹರಿದಾಸ ಜಯಾನಂದ ಕುಮಾರ್ ಹೊಸದುರ್ಗ, ಸೂರ್ಯಕಾಂತಿ, ಶ್ರೀಲತಾ ಟೀಚರ್, ರೂಪಕಲಾ ಹೊಳ್ಳ ಹಾಗೂ ವಲಯ ಸಮಿತಿ ಸದಸ್ಯರು ಉಪಸ್ಥಿತರಿದ್ದರು.

Post a Comment

0 Comments