Ticker

6/recent/ticker-posts

ಪೆರಡಾಲ ಕ್ಷೇತ್ರ ವಾರ್ಷಿಕ ಕಾರ್ಯಕ್ರಮ, ಶಿವಾರ್ಪಣಂ ಕೂಪನ್ ಬಿಡುಗಡೆ, ಧಾರ್ಮಿಕ ಸಭೆ ಮೇ.1 ರಂದು, ಎಡನೀರು ಶ್ರೀಗಳ ಆಶೀರ್ವಾದ ಪಡೆದ ಪದಾಧಿಕಾರಿಗಳು


 ಪೆರಡಾಲ: ಮೇ ಒಂದರಂದು ಪೆರಡಾಲ  ಶ್ರೀ ಉದನೇಶ್ವರ ದೇವಸ್ಥಾನದಲ್ಲಿ  ವಾರ್ಷಿಕ ಕಾರ್ಯಕ್ರಮ , ಶಿವ ಶಕ್ತಿ ಪೆರಡಾಲ ಆಯೋಜಿಸುವ ಶಿವಾರ್ಪಣಂ ನಿಧಿ ಕೂಪನ್ ಬಿಡುಗಡೆ ಮತ್ತು ಧಾರ್ಮಿಕ ಸಭೆ ನಡೆಯಲಿದೆ.

ಶ್ರೀ ಕ್ಷೇತ್ರದ ಜೀರ್ಣೋದ್ಧಾರ ಕಾರ್ಯಗಳು ಭರದಿಂದ ಸಾಗುತ್ತಿದೆ ಒಳ ಸುತ್ತುಪೌಲಿ ನಮಸ್ಕಾರ ಮಂಟಪದ ಕಾಮಗಾರಿಗಳು ಪ್ರಗತಿಯಲ್ಲಿವೆ ..

ಶ್ರೀ ಉದನೇಶ್ವರ ದೇವಸ್ಥಾನ ಪೆರಡಾಲ ಜೀರ್ಣೋದ್ಧಾರ ಸಮಿತಿಯ ಗೌರವ ಮಾರ್ಗದರ್ಶಕರಾದ  ಎಡನೀರು ಮಠಾಧೀಶರಾದ ಶ್ರೀ ಶ್ರೀ ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿಯವರನ್ನು ಬೇಟಿ ಮಾಡಿದ ಪದಾಧಿಕಾರಿಗಳು ಆಶೀರ್ವಾದ ಪಡೆದುಕೊಂಡಿದ್ದಾರೆ‌

ಶ್ರೀ ಕ್ಷೇತ್ರದ ಜೀರ್ಣೋದ್ಧಾರ ಕಾರ್ಯಗಳ ಬಗ್ಗೆ ಪೂಜ್ಯ ಶ್ರೀಗಳು ಮಾಹಿತಿ ಪಡೆದುಕೊಂಡರು

ಈ ಸಂದರ್ಭದಲ್ಲಿ ಮೇ ಒಂದರ ವಾರ್ಷಿಕ ಕಾರ್ಯಕ್ರಮದ ಆಮಂತ್ರಣ ಪತ್ರಿಕೆ ನೀಡಿ ಶ್ರೀ ಕ್ಷೇತ್ರಕ್ಕೆ ಕಾರ್ಯಕ್ರಮಕ್ಕೆ ಗೌರವಪೂರ್ಣವಾಗಿ ಆಮಂತ್ರಿಸಲಾಯಿತು.

ಮೊಕ್ತೇಸರ  ಜಗನ್ನಾಥ ರೈ ಪೆರಡಾಲ ಗುತ್ತು, ಜೀರ್ಣೋದ್ದಾರ ಸಮಿತಿ ಕೋಶಾಧಿಕಾರಿ  ಸೂರ್ಯ ನಾರಾಯಣ ಎಂ,ಸೇವಾ ಸಮಿತಿ ಪ್ರಧಾನ ಕಾರ್ಯದರ್ಶಿ  ನಿರಂಜನ ರೈ ಪೆರಡಾಲ,ಜೀರ್ಣೋದ್ದಾರ ಸಮಿತಿ ಪದಾಧಿಕಾರಿಗಳಾದ  ಗಣೇಶ್ ಪ್ರಸಾದ್ ಕಡ್ಡಪ್ಪು, ಭಾಸ್ಕರ ಪಂಜಿತಡ್ಕ ಉಪಸ್ಥಿತರಿದ್ದರು..

Post a Comment

0 Comments