ಮಂಜೇಶ್ವರ: ಯುಡಿಎಫ್ ಪುತ್ತಿಗೆ ಪಂಚಾಯತ್ ಅಧ್ಯಕ್ಷರೂ, ಕಾಂಗ್ರೆಸ್ ಮಂಡಲ ಅಧ್ಯಕ್ಷರೂ, ಪುತ್ತಿಗೆ ಎಣ್ಮಕಜೆ ಅರ್ಬನ್ ಸೊಸೈಟಿಯ ನಿರ್ದೇಶಕರು ಆಗಿರುವ ಸುಲೈಮಾನ್ ಊಜಂಪದವಿನ ಮೇಲೆ ಸಿಪಿಐಎಂ ಗೂಂಡಾಗಳು ಹಲ್ಲೆ ಮಾಡಿರುವುದನ್ನು ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಜಿಲ್ಲಾ ಸಮಿತಿ ಪ್ರಧಾನ ಕಾರ್ಯದರ್ಶಿ ಸೋಮಶೇಖರ್ ಜೆ.ಎಸ್.ತೀವ್ರವಾಗಿ ಖಂಡಿಸಿದ್ದಾರೆ.
ಗೃಹಪ್ರವೇಶ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಬಂದಿದ್ದ ಸುಲೈಮಾನ್ ಅವರನ್ನು ಸಿಪಿಎಂ ಗೂಂಡಾಗಳು ಏಕಾಏಕಿ ದಾಳಿ ಮಾಡಿದ್ದು,ಇದು ಫಾಸಿಸ್ಟ್ ಶೈಲಿಯಾಗಿದೆ. ಪುತ್ತಿಗೆಯ ಶಾಂತಿಯುತ ಪರಿಸರವನ್ನು ಹಾಳುಮಾಡಲು ಉದ್ದೇಶಿತ ಷಡ್ಯಂತ್ರವಿದು , ಇದರ ವಿರುದ್ಧ ಕಾಂಗ್ರೆಸ್ ನ ಎಲ್ಲಯ ಕಾರ್ಯಕರ್ತರು ಒಂದಾಗಿ ಪ್ರತಿಭಟಿಸಲಿದ್ದೇವೆ ಎಂದು ಅವರು ಮಾಧ್ಯಮ ಹೇಳಿಕೆಯಲ್ಲಿ ತಿಳಿಸಿದ್ದಾರೆ.
0 Comments