ಬೆಳ್ಳೂರು: ಇತಿಹಾಸ ಪ್ರಸಿದ್ದವಾದ ಕುಳದಪಾರೆ ಶ್ರೀ ವಿಷ್ಣುಮೂರ್ತಿ ಒತ್ತೆಕೋಲವು ಎಪ್ರಿಲ್ 21, 22 ಎಂಬೀ ದಿನಗಳಲ್ಲಿ ಜರಗಲಿರುವುದು. ಕಾರ್ಯಕ್ರಮದ ಅಂಗವಾಗಿ 21 ಸೋಮವಾರ ಬೆಳಗ್ಗಿನಿಂದ ಮೇಲೇರಿ ಸೇರಿಸುವುದು, ಸಾಯಂಕಾಲ 7 ಕ್ಕೆ ಕುಳದ ದೈವಸ್ಥಾನದಿಂದ ಕುಳದಪಾರೆಗೆ ಭಂಡಾರ ಹೊರಡುವುದು, 8 ಗಂಟೆಗೆ ಮೇಲೇರಿಗೆ ಅಗ್ನಿಸ್ಪರ್ಶ, ರಾತ್ರಿ 8.30 ರಿಂದ ಕುಳದಪಾರೆ ಅಂಗನವಾಡಿ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ, 9 ರಿಂದ ನೃತ್ಯ ವೈವಿದ್ಯ, ರಾತ್ರಿ 11 ಗಂಟೆಗೆ ಶ್ರೀ ವಿಷ್ಣುಮೂರ್ತಿ ದೈವದ ಕುಳಿಚಾಟ್ಟ,
ರಾತ್ರಿ 1.30 ರಿಂದ ಅಭಿನಯ ಕಲಾ ತಂಡ ಕಾಸರಗೋಡು ಇವರು ಅಭಿನಯಿಸುವ ಸಾಮಾಜಿಕ ಹಾಸ್ಯಮಯ ನಾಟಕ "ಅಣ್ಣೆ ಬರುವೆನಾ" ಎಪ್ರಿಲ್ 22 ಮಂಗಳವಾರ ಪ್ರಾತಃಕಾಲ 5 ಕ್ಕೆ ಶ್ರೀ ವಿಷ್ಣುಮೂರ್ತಿ ದೈವದ ಅಗ್ನಿಸೇವೆ, 7 ರಿಂದ ಅರಶಿನ ಪ್ರಸಾದ ಸ್ವೀಕಾರ, ಭಂಡಾರ ನಿರ್ಗಮನ ಇರುವುದು.
0 Comments