ಕುಂಬಳೆ :ಶ್ರೀ ಭಾರತೀ ವಿದ್ಯಾಪೀಠ ಮುಜುಂಗಾವು 24 ವರ್ಷಗಳನ್ನು ಪೂರೈಸಿ ರಜತ ಮಹೋತ್ಸವದ ಸಂಭ್ರಮದಲ್ಲಿದೆ. ಈ ಪ್ರಯುಕ್ತ ಶಾಲೆಯ ನೂತನ ಸಭಾಭವನದ ಕಟ್ಟಡಕ್ಕೆ ಭೂಮಿ ಪೂಜೆ ಹಾಗೂ ಶಿಲಾನ್ಯಾಸ ಕಾರ್ಯಕ್ರಮವು ವೇದಮೂರ್ತಿ ಕೋಣಮ್ಮೆ ಮಹಾದೇವ ಭಟ್ಟರ ನೇತೃತ್ವದಲ್ಲಿ ಜರಗಿತು. ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿ, ಶಿಲಾನ್ಯಾಸ ನೆರವೇರಿಸಿದ ಶ್ರೀ ಯುತ ಕೆ.ಕೆ ಶೆಟ್ಟಿ ಉದ್ಯಮಿಗಳು ಹಾಗೂ ಆಡಳಿತ ಮೊಕ್ತೇಸರರು ಶ್ರೀ ರಾಜರಾಜೇಶ್ವರಿ ದೇವಸ್ಥಾನ ಮುಂಡಪಳ್ಳ ,ಇವರು ಮಾತನಾಡುತ್ತಾ , ದೇವಾಲಯ ಮತ್ತು ವಿದ್ಯಾಲಯ ಇವೆರಡೂ ಸಮಾಜಕ್ಕೆ ಅತ್ಯಂತ ಪವಿತ್ರ, ವಿದ್ಯಾಲಯದಲ್ಲಿ ನಾವು ವಿದ್ಯಾರ್ಥಿಗಳ ರೂಪದಲ್ಲಿ ಪ್ರತ್ಯಕ್ಷ ದೇವರನ್ನು ಕಾಣಬಹುದು ಎಂದರಲ್ಲದೆ, ಈ ವಿದ್ಯಾಸಂಸ್ಥೆಗೆ ತಮ್ಮ ಸಹಕಾರ ಮತ್ತು ಬೆಂಬಲ ಸದಾ ಇರಲಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಿದ್ಯಾಲಯದ ಹಾಗೂ ರಜತೋತ್ಸವ ಸಮಿತಿ ಅಧ್ಯಕ್ಷರಾದ ಶ್ರೀ ಸುಬ್ರಹ್ಮಣ್ಯ ಭಟ್ ಬೆಜಪ್ಪೆ ವಹಿಸಿ ಎಲ್ಲರ ಸಹಕಾರವನ್ನು ಬಯಸಿದರು.
ಈ ಶುಭಾವಸರದಲ್ಲಿ ಶ್ರೀ ಕೃಷ್ಣ ಮೂರ್ತಿ ಮಾಡಾವು , ಅಧ್ಯಕ್ಷರು ಮುಳ್ಳೇರಿಯ ಹವ್ಯಕ ಮಂಡಲ,
ಶ್ರೀ ಹೆಚ್ ಶಿವರಾಮ ಭಟ್ ಕಾರಿಂಜ ಹಳೆಮನೆ, ಪ್ರಾರಂಭಿಕ ಸದಸ್ಯರು ಹವ್ಯಕ ಅಭ್ಯುದಯ ಟ್ರಸ್ಟ್,ಶ್ರೀ ಉದಯಶಂಕರ ಭಟ್ ಮಿತ್ತೂರು , ಕಾರ್ಯದರ್ಶಿಗಳು ಹವ್ಯಕ ಮಹಾಮಂಡಲ. ಬಾಲಸುಬ್ರಹ್ಮಣ್ಯ ಭಟ್ ಚೆಕ್ಕಣಿಕೆ, ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷರು,ವಡಾ. ಡಿ.ಪಿ ಭಟ್ ಕುಂಬಳೆ
ಅಧ್ಯಕ್ಷರು ಕುಂಬಳೆ ವಲಯ, ಶ್ರೀ ಸುಬ್ರಹ್ಮಣ್ಯ ಭಟ್ ಕೆರೆಮೂಲೆ, ಕಾರ್ಯದರ್ಶಿಗಳು ಮುಳ್ಳೇರಿಯಾ ಹವ್ಯಕಚಮಂಡಲ ಉಪಸ್ಥಿತರಿದ್ದು ಶುಭ ಹಾರೈಸಿದರು. ಶಾಲಾ ಮುಖ್ಯ ಶಿಕ್ಷಕರಾದ ಶ್ರೀ ಶಾಮ್ ಭಟ್ ದರ್ಬೆ ಮಾರ್ಗ , ವಿದ್ಯಾಲಯದ ರಜತೋತ್ಸವ ವರ್ಷದ ಕಾರ್ಯಯೋಜನೆಗಳ ಬಗ್ಗೆ ಪ್ರಾಸ್ತಾವಿಕ ನುಡಿಗಳ ಮೂಲಕ ಪ್ರಸ್ತುತ ಪಡಿಸಿದರು.
ಆಡಳಿತ ಸಮಿತಿ ಪದಾಧಿಕಾರಿಗಳು, ರಜತೋತ್ಸವ ಸಮಿತಿ ಪದಾಧಿಕಾರಿಗಳು, ಶಿಕ್ಷಕವೃಂದ ಹಾಗೂ ರಕ್ಷಕರು ಕಾರ್ಯಕ್ರಮದಲ್ಲಿ ಭಾಗವಹಿಸಿ ಯಶಸ್ವಿಗೊಳಿಸಿದರು.
ಶಾಲಾ ಸಹ ಮುಖ್ಯ ಶಿಕ್ಷಕಿ ಶ್ರೀಮತಿ ಚಿತ್ರಾ ಸರಸ್ವತಿ ಕಾರ್ಯಕ್ರಮ ನಿರೂಪಿಸಿದರು. ಆಡಳಿತ ಸಮಿತಿ ಜತೆಕಾರ್ಯದರ್ಶಿಗಳಾದ ಶ್ರೀ ಬಾಲಕೃಷ್ಣ ಶರ್ಮ ಅನಂತಪುರ ಸ್ವಾಗತಿಸಿ , ರಜತೋತ್ಸವ ಸಮಿತಿಯ ಕಾರ್ಯದರ್ಶಿಗಳಾದ ಶ್ರೀ ಗೋಪಾಲಕೃಷ್ಣ ಭಟ್ ಶೇಡಿಗುಮ್ಮೆ ಧನ್ಯವಾದ ಸಮರ್ಪಿಸಿದರು.
0 Comments