Ticker

6/recent/ticker-posts

ವಾಚನಾಸಕ್ತಿ ಮೂಡಿಸಿದ ಪಡ್ರೆ ಶಾಲಾ ವಾಚನಾ ದಿನಾಚರಣೆ


 ಪಡ್ರೆ: ಜಿ ಎಚ್ ಎಸ್ ಎಸ್ ಪಡ್ರೆ ಶಾಲೆಯಲ್ಲಿ ವಾಚನ ದಿನಾಚರಣೆ  ನಡೆಯಿತು. 

ಕಾರ್ಯಕ್ರಮವನ್ನು ಪದ್ಮಶ್ರೀ ಪ್ರಶಸ್ತಿ ವಿಜೇತ ,ಬರಹಗಾರ ರಾದಂತಹ ಸತ್ಯನಾರಾಯಣ ಬೆಳೇರಿ ಅವರು ಉದ್ಘಾಟಿಸಿ ಓದುವ ಹವ್ಯಾಸವು ವ್ಯಕ್ತಿತ್ವ ನಿರ್ಮಾಣಕ್ಕೆ ಹೇಗೆ ಸಹಾಯ ಮಾಡುತ್ತದೆ ಎಂಬುದರ ಕುರಿತು ಪ್ರೇರಣಾದಾಯಕ ಭಾಷಣ ಮಾಡಿದರು.

ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ  ಲೇಖಕ ದಯಾನಂದ ರೈ ಕಳುವಾಜೆ ಅವರು ಶಿಕ್ಷಣವು ವ್ಯಕ್ತಿಯ ಜೀವನದ ಸರ್ವಶ್ರೇಷ್ಠ ಸಂಪತ್ತು ಎಂದರು. ಮಕ್ಕಳಲ್ಲಿ ಓದುವಿಕೆಯಲ್ಲಿ ಆಸಕ್ತಿ ಬೆಳೆಸುವುದು ಹೇಗೆ ಎಂಬುದರ ಕುರಿತು  ಅಭಿಪ್ರಾಯ ವ್ಯಕ್ತಪಡಿಸಿದರು.

 ಹಿರಿಯ ಶಿಕ್ಷಕಿ.ಸರಸ್ವತಿ ಕೆ ಎನ್  ಶುಭಾಶಂಸನೆ ಗೈದರು. ಮುಖ್ಯೋಪಾಧ್ಯಾಯ ವಾಸುದೇವ ನಾಯಕ್ ಸ್ವಾಗತಿಸಿ ಶಿಕ್ಷಕ ನವಪ್ರಸಾದ್ ವಂದಿಸಿದರು. 

ವಿದ್ಯಾರ್ಥಿಗಳು, ಶಿಕ್ಷಕರು ಹಾಗೂ ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು.

Post a Comment

0 Comments