Ticker

6/recent/ticker-posts

ಯುವತಿ ನೇಣು ಬಿಗಿದು ಆತ್ಮಹತ್ಯೆಗೈದ ಪ್ರಕರಣ; ಮೂರು ಮಂದಿ ಆರೋಪಿಗಳ ಸೆರೆ


 ಯುವತಿ ನೇಣು ಬಿಗಿದು ಆತ್ಮಹತ್ಯೆಗೈದ ಪ್ರಕರಣದಲ್ಲಿ ಮೂರು ಮಂದಿ ಎಸ್.ಡಿ.ಪಿ.ಐ ಕಾರ್ಯಕರ್ತರನ್ನು ಪೊಲೀಸರು ಬಂಧಿಸಿದ್ದಾರೆ.  ಕಣ್ಣೂರು ಕಾಯಲೋಡು ನಿವಾಸಿ ರಸೀನ(40) ಆತ್ಮಹತ್ಯೆಗೈದ ಪ್ರಕರಣದಲ್ಲಿ ‌ಮುಬಾಶಿರ್,ಫೈಸಲ್, ರಫನಾಸ್ ಎಂಬಿವರು ಬಂಧಿತ ಆರೋಪಿಗಳಾಗಿದ್ದಾರೆ.

    ಜೂನ್ 17 ರಂದು ಸಂಜೆ ರಸೀನಾ ಆಕೆಯ ಗೆಳೆಯನ ಜತೆ‌ ಮಾತನಾಡುತ್ತಿರುವುದನ್ನು ಕಂಡ ಆರೋಪಿಗಳು ಈ ಬಗ್ಗೆ ಪ್ರಶ್ನಿಸಿದ್ದರು.ಅಲ್ಲದೆ ಗೆಳೆಯನನ್ನು ತಡೆದು ನಿಲ್ಲಿಸಿ ಅರ್ದ ರಾತ್ರಿಯ ವರೆಗೆ ವಿಚಾರಣೆ ನಡೆಸಿದ್ದು ಆತನ‌ ಮೊಬೈಲು‌ ಫೋನು, ಟಾಬ್ ಎಂಬಿವುಗಳನ್ನು ವಶಪಡಿಸಿದ್ದರು.ಇದರಿಂದ ಮನನೊಂದ ರಸೀನಾ ಎಲ್ಲ ವಿಷಯಗಳನ್ನು ಬರೆದಿಟ್ಟು  ನೇಣು ಬಿಗಿದು ಆತ್ಮಹತ್ಯೆಗೈದಿದ್ದಳು. ಈ ಬಗ್ಗೆ ಪೊಲೀಸರು ತನಿಖೆ ನಡೆಸಿ ಆರೋಪಿಗಳನ್ನು ಬಂಧಿಸಿದ್ದಾರೆ

Post a Comment

0 Comments