Ticker

6/recent/ticker-posts

Ad Code

ಸೇವಾಭಾರತಿ ಕಾಸರಗೋಡು ನಗರ ಘಟಕದ ನೂತನ ಆಂಬುಲೆನ್ಸ್ ಲೋಕಾರ್ಪಣೆ

 

ಕಾಸರಗೋಡು: ರಾಷ್ಟ್ರೀಯ ಸೇವಾಭಾರತಿ ಕಾಸರಗೋಡು ನಗರ ಘಟಕದ ನೂತನ ಆಂಬುಲೆನ್ಸ್ ಲೋಕಾರ್ಪಣಾ ಕಾರ್ಯಕ್ರಮ ಜರಗಿತು. ಕಾಸರಗೋಡು ಜನಾರ್ದನ ಆಸ್ಪತ್ರೆಯ (ಡ್ರೀಂ ಫ್ಲವರ್ ಐವಿಎಫ್ ಸೆಂಟರ್) ಡಾ. ಜಯಲಕ್ಷ್ಮಿ ಸೂರಜ್ ಅವರ ತಂದೆ ಡಾ. ವಿ.ಎಂ ವಿಜಯನ್ ಅವರ ಸ್ಮರಣಾರ್ಥಾವಾಗಿ  ತಾಯಿ ಮಣಿಬೆನ್ ವಿಜಯನ್ ಅವರು ನೂತನ ಆಂಬುಲೆನ್ಸ್ ನ್ನು ಸೇವಾಭಾರತಿ ಕಾಸರಗೋಡು ಜಿಲ್ಲಾಧ್ಯಕ್ಷರಾದ ದಿನೇಶ್ ಎಂ.ಟಿ ಅವರಿಗೆ ಡಾಕ್ಟರ್ ಸೂರಜ್ ಮತ್ತು ಡಾ.ಜಯಲಕ್ಷ್ಮಿ ಸೂರಜ್ ಅವರ ಉಪಸ್ಥಿತಿಯಲ್ಲಿ ಹಸ್ತಾಂತರಿಸಿದರು. ಈ ಸಂದರ್ಭದಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ಜಿಲ್ಲಾ ಕಾರ್ಯವಾಹ್ ಪವಿತ್ರನ್ ಕುದ್ರೆಪ್ಪಾಡಿ, ಜಿಲ್ಲಾ ಸಂಪರ್ಕ ಪ್ರಮುಖ್ ಸುನಿಲ್ ಕುದ್ರೆಪ್ಪಾಡಿ, ವಾರ್ಡ್ ಸದಸ್ಯರಾದ ರಾಮಕೃಷ್ಣ ಹೊಳ್ಳ, ದಿವ್ಯ, ಎನ್.ಸತೀಶ್, ರವಿ ಕೇಸರಿ, ಬಾಲಕೃಷ್ಣ, ಅಜೀಶ್, ಉಮೇಶ, ದಯಾನಂದ ಭಟ್ಟ್, ಸಂತೋಷ್, ವಿನಿಲ್, ಸೌಮ್ಯ,ಆಸ್ಪತ್ರೆ ಪಿ.ಆರ್.ಒ ಶ್ರೀಚಂದ್, ಸೇವಾಭಾರತಿ ಕಾಸರಗೋಡು ನಗರ ಸಮಿತಿ ಅಧ್ಯಕ್ಷ ಸುಜಿತ್ ಕುಮಾರ್, ಸೇವಾಭಾರತಿ ಕಾಸರಗೋಡು ಜಿಲ್ಲಾ ಕೋಶಾಧಿಕಾರಿ ಶ್ರೀಜ, ಶ್ರೀಕಾಂತ್ ಉಪಸ್ಥಿತರಿದ್ದರು. ಸೇವಾಭಾರತಿ ನಗರ ಪ್ರಧಾನ ಕಾರ್ಯದರ್ಶಿ ಸಂದೇಶ್ ಕೇಳುಗುಡ್ಡೆ ಸ್ವಾಗತಿಸಿ, ರಾಷ್ಟ್ರೀಯ ಸ್ವಯಂಸೇವಕ ಸಂಘದ ಖಂಡ್ ಸೇವಾ ಪ್ರಮುಖ್ ಜಯಕುಮಾರ್ ವಂದಿಸಿದರು.

Post a Comment

0 Comments