Ticker

6/recent/ticker-posts

Ad Code

ಕಾಡುಹಂದಿಯ ಸೆರೆಗಾಗಿ ಹಾಕಿದ್ದ ಬಲೆಯಲ್ಲಿ ಸಿಲುಕಿದ ಬೃಹತ್ ಗಾತ್ರದ ಹೆಬ್ಬಾವು

ಕಣ್ಣೂರು:  ಕಾಡುಹಂದಿಗಳು ಜಮೀನಿಗೆ ಪ್ರವೇಶಿಸದಂತೆ ಹಾಕಲಾಗಿದ್ದ ಬಲೆಯಲ್ಲಿ ಸಿಲುಕಿದ್ದ ಹೆಬ್ಬಾವನ್ನು ಉರಗ ಪ್ರೇಮಿಗಳ ನೇತೃತ್ವದಲ್ಲಿ ರಕ್ಷಿಸಿದ ಘಟನೆ ಕಣ್ಣೂರಿನ ಪಟ್ಟುವಂ ಕುನ್ನೇರುವಿಲ್‌ನಲ್ಲಿ ನಡೆದಿದೆ. ಬಲೆಯಲ್ಲಿ ಸಿಲುಕಿದ್ದ ಹಾವನ್ನು ನೋಡಿದ ತೋಟದ ಮಾಲೀಕರು ತಕ್ಷಣ ತಳಿಪರಂಬ ಅರಣ್ಯ ಕಚೇರಿಗೆ ಮಾಹಿತಿ ನೀಡಿದರು. ನಂತರ ಉರಗ ಪ್ರೇಮಿಗಳಾದ ಅನಿಲ್ ತ್ರಿಚಂಬರಂ ಮತ್ತು ಸೂಚಿಂದ್ರನ್ ಮೊಟ್ಟಮ್ಮಾಲ್ ಬಲೆಯನ್ನು ಕತ್ತರಿಸಿ ಹಾವನ್ನು ರಕ್ಷಿಸಿದರು. ಗಂಭೀರವಾಗಿ ಗಾಯಗೊಂಡ ಹೆಬ್ಬಾವನ್ನು ತಳಿಪರಂಬ ಪಶುವೈದ್ಯಕೀಯ ಆಸ್ಪತ್ರೆಗೆ ಕರೆದೊಯ್ಯಲಾಯಿತು. ವೈದ್ಯರಾದ ಸುರೇಶ್ ಮತ್ತು ರೇಷ್ಮಾ ಹಾವಿನ ಗಾಯವನ್ನು ಹೊಲಿದು ಹಾವಿನ ಗಾಯ ವಾಸಿಯಾಗುವವರೆಗೂ ಅದನ್ನು ರೇಂಜ್ ಆಫೀಸರ್ ಸನೂಪ್ ಕೃಷ್ಣನ್ ಅವರ ಆರೈಕೆಯಲ್ಲಿ ಇಡಲಾಗಿದೆ. 

Post a Comment

0 Comments