Responsive Advertisement
Responsive Advertisement

Header Ads Widget

Responsive Advertisement

ಪ್ರಮುಖ ಸುದ್ದಿ

6/recent/ticker-posts

ಜಾಹೀರಾತು

Responsive Advertisement

ವಿಷ ಪ್ರಾಶನಗೈದು ಸಾವನ್ನಪ್ಪಿದ ಜಿಲ್ಲಾಧಿಕಾರಿ ಕಚೇರಿಯ ಸರ್ಕಾರಿ ನೌಕರೆಯ ಮೃತದೇಹ ಇಂದು ಸಾರ್ವಜನಿಕ ದರ್ಶನದೊಂದಿಗೆ ಅಂತ್ಯ ಸಂಸ್ಕಾರ

ಕಾಸರಗೋಡು : ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದ ಕಾಸರಗೋಡು ಜಿಲ್ಲಾಧಿಕಾರಿ ಕಚೇರಿಯ ಸರ್ಕಾರಿ ನೌಕರೆ ಆಶಾಲತಾ (41) ಚಿಕಿತ್ಸೆ ಫಲಿಸದೆ ಕೋಝಿಕ್ಕೋಡ್‌ನ ಖಾಸಗಿ ಆಸ್ಪತ್ರೆಯಲ್ಲಿ ಭಾನುವಾರ ಮಧ್ಯಾಹ್ನ ಮೃತಪಟ್ಟಿದ್ದು ಮೃತದೇಹವನ್ನು ಇಂದು ಸಾರ್ವಜನಿಕ ಅಂತಿಮ ದರ್ಶನದೊಂದಿಗೆ ಸಂಸ್ಕರಿಸಲಾಗುವುದು ಎಂದು ಕುಟುಂಬ ಮೂಲಗಳು ತಿಳಿಸಿವೆ.

ಚೆಂಗಳ ಅದ್ರುಗುಳಿ ನಿವಾಸಿಯಾಗಿದ್ದ ಆಶಾಲತಾ, ಕಾಸರಗೋಡು ಜಿಲ್ಲಾಧಿಕಾರಿ ಕಚೇರಿಯ ಎಂಡೋಸಲ್ಫಾನ್ ಸೆಲ್‌ನಲ್ಲಿ ಉದ್ಯೋಗಿಯಾಗಿದ್ದರು. ಶುಕ್ರವಾರ ವಿಷ ಸೇವಿಸಿ ಅಸ್ವಸ್ಥಗೊಂಡಿದ್ದ ಅವರನ್ನು ಚೆಂಗಳದ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಕಾಸರಗೋಡು ನಗರದ ಖಾಸಗಿ ಆಸ್ಪತ್ರೆಗೆ ಸ್ಥಳಾಂತರಿಸಲಾಗಿತ್ತು.

ಆಶಾಲತಾ ಅವರ ಆರೋಗ್ಯ ಸ್ಥಿತಿ ಗಂಭೀರವಾಗಿದ್ದ ಹಿನ್ನೆಲೆಯಲ್ಲಿ ಶುಕ್ರವಾರ ರಾತ್ರಿ ಕೋಝಿಕ್ಕೋಡ್‌ನ ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಆದರೆ ಚಿಕಿತ್ಸೆ ಮುಂದುವರಿದಿದ್ದರೂ ಭಾನುವಾರ ಮಧ್ಯಾಹ್ನ ಅವರು ಮೃತಪಟ್ಟಿದ್ದರು. ಮೃತದೇಹ ಬೆಳಗ್ಗೆ 10 ಗಂಟೆಗೆ .ಕೆ ನಾಯನಾರ್ ಹಾಸ್ಪಿಟಲ್ ನಲ್ಲಿ, 10. 30ತನಕ ಜಿಲ್ಲಾಧಿಕಾರಿ ಕಚೇರಿಯಲ್ಲಿ, 11 ಗಂಟೆ ತನಕ ಅದ್ರುಗುಳಿ ಯುವಶಕ್ತಿ ವಾಚನಾಲಯದಲ್ಲಿ, 11.30ಗಂಟೆಗೆ ಮನೆ ಪರಿಸರದಲ್ಲಿ ಅಂತಿಮ ದರ್ಶನದೊಂದಿಗೆ ಅಂತ್ಯ ಸಂಸ್ಕಾರ ಕಾರ್ಯ ನಡೆಸಲಾಗುವುದೆಂದು ಸಂಬಂಧ ಪಟ್ಟವರು ತಿಳಿಸಿದ್ದಾರೆ.



ಹೆಚ್ಚಿನ ಅಪ್‌ಡೇಟ್‌ಗಳಿಗಾಗಿ ವೀಕ್ಷಿಸಿ – ವಿಶೇಷ ಚಾನೆಲ್


https://www.instagram.com/visheshachannel/

https://www.facebook.com/profile.php?id=61572771802334

https://x.com/VisheshaC4541

https://www.linkedin.com/in/visheshachannel/

www.youtube.com/@VisheshaChannelofficial



#news #viral #blogger #viralnews #dailypost

Post a Comment

0 Comments

ಜಾಹೀರಾತು

Responsive Advertisement