ಪೆರ್ಲ : ಪೆರ್ಲದ ಹಿರಿಯ ಜೀಪು ಚಾಲಕರಾಗಿದ್ದ ರವೀಂದ್ರ ಶೆಟ್ಟಿ (58) ನಿಧನ ಹೊಂದಿದರು. ಮೂಲತಃ ಕರ್ನಾಟಕದವರಾಗಿದ್ದ ಇವರು ಎಣ್ಮಕಜೆ ಸಮೀಪದ ಸೇರಾಜೆಯಲ್ಲಿ ವಾಸಿಸುತ್ತಿದ್ದು ಅಲ್ಪ ಕಾಲದಿಂದ ಅಸೌಖ್ಯದಿಂದಿದ್ದರು. ಇಂದು ಬೆಳಗ್ಗೆ ಚಿಕಿತ್ಸೆಗೆಂದು ತೆರಳಲು ಕುಂಬಳೆ ಸಮೀಪದ ಕಿದೂರಿನ ತನ್ನ ಮಗಳ ಮನೆಯಿಂದ ರಿಕ್ಷಾ ಹತ್ತುತ್ತಿದ್ದಂತೆ ಕುಸಿದು ಬಿದ್ದರೆನ್ನಲಾಗಿದೆ. ತಕ್ಷಣ ಆಸ್ಪತ್ರೆಗೆ ಸಾಗಿಸಿದರೂ ಜೀವ ಉಳಿಸಲಾಗಿಲ್ಲ. ಮೃತರು ಪತ್ನಿ ಲತಾ ರೈ (ಪೆರ್ಲ ಕುಟುಂಬಶ್ರೀ ಜನಕೀಯ ಹೋಟೇಲ್ ಉದ್ಯೋಗಿ) ಮಗಳು ಸಿಂಚನ, ಮಗ ಸಂಜನ್, ಅಳಿಯ ಕಿಶೋರ್ ಹಾಗೂ ಅಪಾರ ಬಂಧು ಬಳಗವನ್ನಗಲಿದ್ದಾರೆ. ಮೃತರ ನಿಧನಕ್ಕೆ ಆರ್ ಎಂ ಕೆ ಸೇರಾಜೆ ಸಂತಾಪ ವ್ಯಕ್ತಪಡಿಸಿದೆ.
ಹೆಚ್ಚಿನ ಅಪ್ಡೇಟ್ಗಳಿಗಾಗಿ ವೀಕ್ಷಿಸಿ – ವಿಶೇಷ ಚಾನೆಲ್
https://www.instagram.com/visheshachannel/
https://www.facebook.com/profile.php?id=61572771802334
https://www.linkedin.com/in/visheshachannel/
www.youtube.com/@VisheshaChannelofficial
#news #viral #blogger #viralnews #dailypost

0 Comments