ಕಾಸರಗೋಡು: ಸಂವಿಧಾನ ಶಿಲ್ಪಿ, ಸಾಮಾಜಿಕ ಪರಿವರ್ತನಾಕಾರ ಡಾ.ಬಿ.ಆರ್.ಅಂಬೇಡ್ಕರ್ ಅವರ ವಿಷಯದಲ್ಲಿ ಎಡ- ಬಲ ರಂಗಗಳು ಅವಗಣನೆ ನಡೆಸುತ್ತಿರುವ ಹಿನ್ನೆಲೆಯಲ್ಲಿ ಬಿಜೆಪಿ ಕಾರ್ಯಕರ್ತರಿಂದ ಹಣ ಸಂಗ್ರಹಿಸಿ ಜಿಲ್ಲೆಯಲ್ಲು ಅವರ ಪ್ರತಿಮೆ ಸ್ಥಾಪಿಸುತ್ತೇವೆಯೆಂದು ಪಕ್ಷದ ಜಿಲ್ಲಾಧ್ಯಕ್ಷೆ ಅಶ್ವಿನಿ ಎಂ.ಎಲ್ ಹೇಳಿದರು.
ಪಕ್ಷದ ರಾಜ್ಯ ಕೌನ್ಸಿಲ್ ಸದಸ್ಯ ಬೇಬಿ ಸುಗುಣನ್ ಅವರು ಡಾ.ಬಿ.ಆರ್.ಅಂಬೇಡ್ಕರ್: ಕಾಂಗ್ರೆಸ್ ಸರಕಾರಗಳ ಅವಗಣನೆ, ನರೇಂದ್ರ ಮೋದಿ ಸರಕಾರದ ಗೌರವ ಎಂಬ ವಿಷಯ ಮಂಡಿಸಿದರು. ಜಿಲ್ಲಾ ಉಪಾಧ್ಯಕ್ಷ ಎ.ಕೆ.ಕಯ್ಯಾರ್ ಅಧ್ಯಕ್ಷತೆ ವಹಿಸಿದರು. ಮುಂದಾಳುಗಳಾದ ಮಣಿಕಂಠ ರೈ, ಎನ್.ಬಾಬು ರಾಜ್, ಪಿ.ಆರ್.ಸುನಿಲ್, ಸಂಜೀವ ಪುಳಿಕೂರ್, ಪುಷ್ಪಾ ಗೋಪಾಲನ್, ಪ್ರಮಿಳಾ ಮಜಲ್, ಅಶ್ವಿನಿ ಕೆ.ಎಂ, ವೀಣಾ ಕುಮಾರಿ, ಗೋಪಾಲಕೃಷ್ಣ ಎಂ, ರಾಮಪ್ಪ ಮಂಜೇಶ್ವರ ಮೊದಲಾದವರು ಮಾತನಾಡಿದರು
0 Comments