ತಿರುವನಂತಪುರಂ: ಕೇಂದ್ರ ಹವಾಮಾನ ಇಲಾಖೆಯು ನಾಳೆ (ಸೋಮವಾರ) ರಾಜ್ಯದ 11 ಜಿಲ್ಲೆಗಳಲ್ಲಿ ರೆಡ್ ಅಲರ್ಟ್ ಘೋಷಿಸಲಾಗಿದೆ. ತಿರುವನಂತಪುರಂ, ಕೊಲ್ಲಂ, ಆಲಪುಯ ಹೊರತು ಪಡಿಸಿದ 11 ಜಿಲ್ಲೆಗಳಲ್ಲಿ ರೆಡ್ ಅಲರ್ಟ್ ಘೋಷಿಸಲಾಗಿದ್ದು ಮೂರು ಜಿಲ್ಲೆಗಳಲ್ಲಿ ಅತೀ ತೀವ್ರ ಮಳೆ ಬರಲಿದೆ. ಮಳೆಯ ಜತೆ ಬಿರುಗಾಳಿ ಬೀಸಲಿದೆಯೆಂದೂ ಹವಾಮಾನ ಇಲಾಖೆ ತಿಳಿಸಿದೆ.
ತೀವ್ರ ಮಳೆಯ ಹಿನ್ನೆಲೆಯಲ್ಲಿ ನಾಳೆ (ಸೋಮವಾರ) ಕಾಸರಗೋಡು ಜಿಲ್ಲೆಯ ಶಿಕ್ಷಣ ಕೇಂದ್ರಗಳಿಗೆ ರಜೆ ಸಾರಲಾಗಿದೆಯೆಂದು ಜಿಲ್ಲಾಧಿಕಾರಿ ಕೆ.ಇಂಬಶೇಖರ್ ಐ.ಎ.ಎಸ್. ತಿಳಿಸಿದ್ದಾರೆ. ಅಂಗನವಾಡಿ, ಟ್ಯೂಶನ್ ಸೆಂಟರ್, ಮದ್ರಸ ಸಹಿತ ರಜೆ ಸಾರಲಾಗಿದೆ. ಈ ಹಿಂದೆ ನಿರ್ದರಿಸಿದ ಪರೀಕ್ಷೆಗಳಲ್ಲಿ ಬದಲಾವಣೆ ಇಲ್ಲ
0 Comments