Ticker

6/recent/ticker-posts

ಜುಲೈ 10ರಿಂದ ಸೆಪ್ಟೆಂಬರ್ 7ರ ವರೆಗೆ ಎಡನೀರು ಶ್ರೀಗಳ ಪಂಚಮ ಚಾತುರ್ಮಾಸ್ಯ ವ್ರತಾಚರಣೆಗೆ ಸಿದ್ಧತೆ


ಕಾಸರಗೋಡು: ಎಡನೀರು ಮಠಾಧೀಶರಾದ 
ಶ್ರೀ ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿ ಅವರ ಪಂಚಮ ಚಾತುರ್ಮಾಸ್ಯ ವ್ರತಾಚರಣೆ ಜುಲೈ 10ರಿಂದ ಸೆಪ್ಟೆಂಬರ್ 7ರ ವರೆಗೆ ವಿವಿಧ ವೈದಿಕ, ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಎಡನೀರು ಮಠದಲ್ಲಿ ವಿಜೃಂಭಣೆಯಿಂದ ಜರಗಲಿದೆ. 


ಕಾರ್ಯಕ್ರಮದ ಯಶಸ್ವಿಗಾಗಿ ಎಡನೀರು ಶ್ರೀಗಳ ನೇತೃತ್ವದಲ್ಲಿ ಊರ ಪರವೂರ ಭಕ್ತಾದಿಗಳ ಮಹಾಸಭೆ ಎಡನೀರು ಶ್ರೀ ಮಠದಲ್ಲಿ ನಡೆಯಿತು. ಸಭೆಯ ತೀರ್ಮಾನದಂತೆ ವಿವಿಧ ಪ್ರದೇಶಗಳಲ್ಲಿ ಪ್ರಾದೇಶಿಕ ಸಮಿತಿಗಳ ರಚಿಸುವ ನಿಟ್ಟಿ ನಲ್ಲಿ ಎಡನೀರು ಶ್ರೀ ಮಠದ ಭಕ್ತರ ಸಭೆ ನಡೆಸಲು ತೀರ್ಮಾನಿಸಲಾಯಿತು.

 


ಚಾತುರ್ಮಾಸ್ಯ ಸಂದರ್ಭದಲ್ಲಿ ವಿವಿಧ ವಲಯಗಳಿಂದ ಹಸಿರುವಾಣಿ ಹೊರೆಕಾಣಿಕೆ ಸಹಿತ ವಿವಿಧ ಸೇವೆಗಳನ್ನು ನೆರವೇರಿಸುವ ಅವಕಾಶವನ್ನು ಕಲ್ಪಿಸಿಕೊಡಲಾಗಿದೆ. ವಿಶೇಷವಾಗಿ ಚಾತುರ್ಮಾಸ್ಯ ಸಂದರ್ಭ ಶನಿವಾರ ಹಾಗೂ ಭಾನುವಾರ ಶ್ರೀ ಮಠಕ್ಕೆ ಭಕ್ತಾದಿಗಳು ಅಧಿಕ ಸಂಖ್ಯೆಯಲ್ಲಿ ಆಗಮಿಸಲಿದ್ದಾರೆ. ಆದ್ದರಿಂದ ವ್ಯವಸ್ಥೆಗಿರುವ ವಿವಿಧ ವಲಯಗಳ ಎಡನೀರು ಶ್ರೀ ಮಠದ ಕಾರ್ಯಕರ್ತರು ತಮ್ಮ ಸೇವಾ ದಿನಾಂಕವನ್ನು ಮುಂಚಿತವಾಗಿ ತಿಳಿಸಬೇಕು ಎಂದು ವಿನಂತಿಸಲಾಗಿದೆ.

ಅದೇ ರೀತಿ ವಿವಿಧ ಪ್ರದೇಶಗಳಿಂದ ಬರುವ ಹಸಿರುವಾಣಿ ಹೊರೆಕಾಣಿಕೆಯ ದಿನಾಂಕವನ್ನು ಮುಂಚಿತವಾಗಿ ತಿಳಿಸಬೇಕಾಗಿದೆ. ಚಾತುರ್ಮಾಸ್ಯ ಸಮಯದಲ್ಲಿ ಶ್ರೀ ಮಠದಲ್ಲಿ ವಿವಿಧ ಸೇವೆಗಳನ್ನು ಮಾಡಲು ಅವಕಾಶ ಒದಗಿಸಲಾಗಿದೆ  ಎಂದು ಚಾತುರ್ಮಾಸ್ಯ ನಿರ್ವಹಣಾ ಸಮಿತಿ ತಿಳಿಸಿದೆ

Post a Comment

0 Comments