ತಿರುವನಂತಪುರಂ: ರಾಜ್ಯದಲ್ಲಿ ಮತ್ತೆ ಮಳೆ ಸಕ್ರಿಯವಾಗುತ್ತಿದೆಯೆಂದು ಹವಾಮಾನ ಇಲಾಖೆ ವರದಿ ಮಾಡಿದೆ. ಈ ತಿಂಗಳ 10,11,12 ಎಂಬೀ ದಿನಗಳಲ್ಲಿ ರಾಜ್ಯದಲ್ಲಿ ಮಳೆ ಜೋರಾಗಲಿದ್ದು ವಿವಿದ ಜಿಲ್ಲೆಗಳಲ್ಲಿ ಎಲ್ಲೋ ಅಲರ್ಟ್ ಘೋಷಿಸಲಾಗಿದೆ. ಮಳೆಯ ಜತೆ ಸಿಡಿಲು, ಮಿಂಚು ಸಹ ಕಾಣಿಸಿಕೊಳ್ಳಲಿದೆ.
ಜೂನ್ 10 ರಂದು ಪತ್ತನಂತಿಟ್ಟ, ಆಲಪುಯ, ಕೊಟ್ಟಯಂ, ಎರ್ನಾಕುಲಂ ಜಿಲ್ಲೆಗಳಲ್ಲಿ ಎಲ್ಲೋ ಅಲರ್ಟ್ ಘೋಷಿಸಲಾಗಿದೆ. 11 ರಂದು ಆಲಪುಯ, ಎರ್ನಾಕುಲಂ, ತ್ರಿಶೂರ್, ಮಲಪ್ಪುರಂ, ಕೋಜಿಕ್ಕೋಡ್ ಜಿಲ್ಲೆಗಳಲ್ಲಿ, 12 ರಂದು ಕಾಸರಗೋಡು, ಕಣ್ಣೂರು ಸಹಿತ 8 ಜಿಲ್ಲೆಗಳಲ್ಲಿ ಎಲ್ಲೊ ಅಲರ್ಟ್ ಘೋಷಿಸಲಾಗಿದೆ. ಮುಂಗಾರು ಮಳೆಯ ಮುಂಚಿತವಾಗಿ ಮೇ.ತಿಂಗಳಲ್ಲಿ ರಾಜ್ಯದ ವಿವಿದೆಡೆ ಭಾರೀ ಮಳೆ, ಗಾಳಿ ಬಂದಿದ್ದು ಸಾಕಷ್ಟು ನಾಶ ನಷ್ಟ ಉಂಟಾಗಿತ್ತು
0 Comments