Ticker

6/recent/ticker-posts

ಪ್ರಜ್ಞಾಹೀನ ಸ್ಥಿತಿಯಲ್ಲಿ ಕಂಡು ಬಂದ ಬಿಜೆಪಿ ನೇತಾರ ಆಸ್ಪತ್ರೆಯಲ್ಲಿ ಮೃತ್ಯು


 ಮುಳಿಯಾರು: ಪ್ರಜ್ಞಾಹೀನ ಸ್ಥಿತಿಯಲ್ಲಿ ಆಸ್ಪತ್ರೆಗೆ ದಾಖಲಿಸಲ್ಪಟ್ಟ ಬಿಜೆಪಿ ಮುಖಂಡ ಮೃತಪಟ್ಟ ಘಟನೆ ನಡೆದಿದೆ. ಮುಳಿಯಾರು ಚಿಪ್ಲಿಕಯ ನಿವಾಸಿ ಹಾಗೂ ಬಿಜೆಪಿ ‌ಮುಳಿಯಾರು ಮಂಡಲ ಸಮತಿ ಸದಸ್ಯ ಅಚ್ಚುತನ್(63) ಮೃತಪಟ್ಟ ವ್ಯಕ್ತಿ. ನಿನ್ನೆ (ಶನಿವಾರ) ರಾತ್ರಿ ಇವರನ್ನು ಪ್ರಜ್ಞಾಹೀನ ಸ್ಥಿತಿಯಲ್ಲಿ ಚೆರ್ಕಳದ ಖಾಸಯ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ನೀಡಿದರೂ ಪ್ರಾಣ ಉಳಿಸಲಾಗಲಿಲ್ಲ.  ಮೃತದೇಹವನ್ನು ಪೋಸ್ಟ್ ಮಾರ್ಟಂ ನಡೆಸಲು ಜನರಲ್ ಆಸ್ಪತ್ರೆಗೆ ಕೊಂಡೊಯ್ಯಲಾಯಿತು. ನಿವೃತ್ತ ಪಂಚಾಯತು ಸಿಬಂದಿಯಾಗಿದ್ದ ಅಚ್ಚುತನ್ ಸಂಘಪರಿವಾರದ ಸಕ್ರಿಯ ಕಾರ್ಯಕರ್ತರಾಗಿದ್ದರು.‌ ಮೃತರು ಪತ್ನಿ ಜಲಜಾಕ್ಷಿ, ಮಕ್ಕಳಾದ ಅಜಯ್ ಕುಮಾರ್, ಅಕ್ಷಯ್ ಕುಮಾರ್, ಸಹೋದರಿ ಕಾರ್ತಿಯಾಯಿನಿ ಎಂಬಿವರನ್ನು ಅಗಲಿದ್ದಾರೆ. ಇದೇ ವೇಳೆ ಸಿಪಿಎಂ‌ನೇತಾರರ ಪುತ್ರನ ನೇತೃತ್ವದಲ್ಲಿ ಚಿಪ್ಲಿಕಾಯ ಪ್ರದೇಶದಲ್ಲಿ ಹಿಂಸಾಚಾರ ನಡೆದಿತ್ತೆಂದೂ ಅಚ್ಚುತನ್ ಅವರ ನಿಧನದ ಬಗ್ಗೆ ಸಮಗಯ ತನಿಖೆ ನಡೆಸಬೇಕೆಂದೂ ಬಿಜೆಪಿ ಒತ್ತಾಯಿಸಿದೆ.

Post a Comment

0 Comments