ಕಾಸರಗೋಡು : ಕರ್ನಾಟಕ ಚುಟುಕು ಸಾಹಿತ್ಯ ಪರಿಷತ್ತು ಕೇಂದ್ರ ಸಮಿತಿ ಹುಬ್ಬಳ್ಳಿ ಮತ್ತು ಕಚುಸಾಪ ಕಾಸರಗೋಡು ಘಟಕ ನೇತೃತ್ವದಲ್ಸಿ ಸಿರಿಬಾಗಿಲು ವೆಂಕಪ್ಪಯ್ಯ ಸಾಂಸ್ಕೃತಿಕ ಪ್ರತಿಷ್ಠಾನ (ರಿ.) ಕಾಸರಗೋಡು ಅಭಿರುಚಿ ಬಳಗ, ಮೈಸೂರು ಇದರ ಸಹಕಾರದೊಂದಿಗೆ
ಕ.ಚು.ಸಾ.ಪ. ಅಂತರ ರಾಜ್ಯಮಟ್ಟದ 4ನೇ ಸಮ್ಮೇಳನ ಜೂ.29ರಂದು ಬೆಳಗ್ಗೆ 10 ಗಂಟೆಯಿಂದ ಸಿರಿಬಾಗಿಲು ವೆಂಕಪ್ಪಯ್ಯ ಸಾಂಸ್ಕೃತಿಕ ಭವನ ಕಾಸರಗೋಡಿನಲ್ಲಿ ನಡೆಯಲಿದೆ.
ಹಿರಿಯ ಕವಿ,ಪತ್ರಕರ್ತ ರಾಧಾಕೃಷ್ಣ ಕೆ. ಉಳಿಯತ್ತಡ್ಕ ದೀಪ ಪ್ರಜ್ವಲನೆಗೈಯುವರು.
ಹಿರಿಯ ಚಿಂತಕ,ಸಾಹಿತಿ ವಿ.ಬಿ.ಕುಳಮರ್ವ ಸರ್ವಾಧ್ಯಕ್ಷತೆ ವಹಿಸುವರು. ಮುಖ್ಯ ಅತಿಥಿಗಳಾಗಿ ವಿದ್ವಾನ್ ರಘುಪತಿ ಭಟ್ ಉಡುಪಿ, ಕೃಷ್ಣಮೂರ್ತಿ ಕುಲಕರ್ಣಿ, ವೆಂಕಟ ಭಟ್ಟ, ಪ್ರೊ.ಜಿ.ಯು.ನಾಯಕ ಭಾಗವಹಿಸುವರು.
ಈ ಸಂದರ್ಭದಲ್ಲಿ ಚುಟುಕು ಸಾಹಿತ್ಯ ಪುಸ್ತಕಗಳ ಬಿಡುಗಡೆ, 'ಚುಟುಕು ಚೇತನ " ಗೌರವ ಪ್ರಶಸ್ತಿ ಪುರಸ್ಕಾರ ಪ್ರದಾನ ಜರಗಲಿದೆ. ಬಳಿಕ 11.30 ಗಂಟೆಯಿಂದ ವಿಚಾರ ಗೋಷ್ಟಿ, ಕವಿಗೋಷ್ಠಿ - ಸಮಾರೋಪ ಸಮಾರಂಭ,ಬಳಿಕ ಡಾ.ವಾಣಿಶ್ರೀ ಕಾಸರಗೋಡು ಇವರ ನೇತೃತ್ವದ " ಗಡಿನಾಡು ಕನ್ನಡ ಸಾಂಸ್ಕೃತಿಕ ಸಂಸ್ಥೆ, ಕಾಸರಗೋಡು ಕಲಾವಿದರಿಂದ ನೃತ್ಯ-ಸಂಗೀತ ವೈಭವ ಪ್ರದರ್ಶನಗೊಳ್ಳಲಿದೆ.
ಬಳಿಕ ಮಧ್ಯಾಹ್ನ 2.30 ಗಂಟೆಯಿಂದ ಹರಿ ಸರ್ವೋತ್ತಮ ಎಂಬ ಯಕ್ಷಗಾನ ತಾಳಮದ್ದಳೆ ಜರಗಲಿದೆ.
0 Comments