Ticker

6/recent/ticker-posts

ನಾಲ್ಕನೇ ತರಗತಿಯಲ್ಲಿ ನಡೆದ ಹೊಡೆದಾಟಕ್ಕೆ 62 ನೇ ವರ್ಷದಲ್ಲಿ ಪ್ರತೀಕಾರ, ಕಾಸರಗೋಡು ಜಿಲ್ಲೆಯ ಚಿತ್ತಾರಿಕಲ್ ಪೊಲೀಸ್ ಠಾಣೆಯಲ್ಲಿ ವಿನೂತನ ರೀತಿಯ ಕೇಸು, ಇಬ್ಬರ ಬಂಧನ


 ಕಾಸರಗೋಡು: ನಾಲ್ಕನೇ ತರಗತಿ ಓದುತ್ತಿರುವ ವೇಳೆ ನಡೆದ ಹೊಡೆದಾಟಕ್ಕೆ 62 ನೇ ವರ್ಷ ಪ್ರಾಯದಲ್ಲಿ ಪ್ರತೀಕಾರ ತೀರಿಸಿದ ಘಟನೆ ನಡೆದಿದೆ. ಕಾಸರಗೋಡು ಜಿಲ್ಲೆಯ ಚಿತ್ತಾರಿಕಲ್ ಪೊಲೀಸ್ ಠಾಣಾ ವ್ಯಾಪ್ತಿಯ ಮಾಲೋಂ ನಿವಾಸಿ ಬಾಲಕೃಷ್ಣನ್  ಎಂಬವರು ತನಗೆ ನಾಲ್ಕನೇ ತರಗತಿಯಲ್ಲಿ ಸಿಕ್ಕ ಪೆಟ್ಟಿಗೆ ಪ್ರತೀಕಾರ ತೀರಿಸಿ ಇದೀಗ ಪೊಲೀಸರ ಅತಿಥಿಯಾಗಿದ್ದಾರೆ.

  ಮಾಲೋಂ ಪೇಟೆಯ ವಿ.ಜೆ.ಬಾಬು ಎಂಬವರು ಇದೀಗ ಪೊಲೀಸರಿಗೆ ದೂರು ನೀಡಿದ ವ್ಯಕ್ತಿ. ಬಾಲಕೃಷ್ಣನ್, ಮಾಥ್ಯು ಎಂಬಿವರು ಸೇರಿ ತನಗೆ ಹಲ್ಲೆಗೈದರೆಂದು ಬಾಬು ಪೊಲೀಸರಿಗೆ ದೂರು ನೀಡಿದ್ದಾರೆ.

   ಬಾಬು ಹಾಗೂ ಬಾಲಕೃಷ್ಣನ್ 4 ನೇ ತರಗತಿಯಲ್ಲಿ ಕ್ಲಾಸ್ ಮೇಟ್ ಗಳಾಗಿದ್ದರು. ಈ ವೇಳೆ ಇಬ್ಬರೊಳಗೆ ಜಗಳ ನಡೆದಿದ್ದು ಬಾಬು ಅವರು ಬಾಲಕೃಷ್ಣರಿಗೆ ಹಲ್ಲೆ ನಡೆಸಿದ್ದರು. ಇದರ ಪ್ರತೀಕಾರವನ್ನು ಬಾಲಕೃಷ್ಣನ್ ತನ್ನ  62 ವರ್ಷದಲ್ಲಿ ಬಾಬುವಿಗೆ ಹಲ್ಲೆಗೈಯ್ಯುವ ಮೂಲಕ ತೀರಿಸಿದ್ದಾರೆ.  ಈ ಬಗ್ಗೆ ಆರೋಪಿ ಬಾಲಕೃಷ್ಣನ್ ಪೊಲೀಸರಿಗೆ ಹೇಳಿಕೆ ನೀಡಿದ್ದಾರೆ.‌ಪೊಲೀಸರು ಬಾಲಕೃಷ್ಣನ್ ಹಾಗೂ ಮಾಥ್ಯು ಎಂಬಿವರನ್ನು ಚಿತ್ತಾರಿಕಲ್ ಪೊಲೀಸರು ಬಂಧಿಸಿದ್ದಾರೆ

Post a Comment

0 Comments