Ticker

6/recent/ticker-posts

ದಾಖಲೆಗಳಿಲ್ಲದೆ ಕೆ.ಎಸ್.ಆರ್.ಟಿ.ಸಿ.ಬಸ್ಸಿನಲ್ಲಿ ಸಾಗಿಸುತ್ತಿದ್ದ 9.98 ಲಕ್ಷ ರೂ.ವಶ, ಮುಳಿಯಾರು ನಿವಾಸಿಯ ಸೆರೆ


 ಮಂಜೇಶ್ವರ: ಕೆ.ಎಸ್.ಆರ್.ಟಿ.ಸಿ. ಬಸ್ಸಿನಲ್ಲಿ ದಾಖಲೆಗಳಿಲ್ಲದೆ ಸಾಗಿಸುತ್ತಿದ್ದ 9.98,500  ರೂ ಎಕ್ಸ್ಪ್ರೆಸ್ ಅಧಿಕಾರಿಗಳು ವಶಪಡಿಸಿದ್ದಾರೆ.  ಇದಕ ಸಂಬಂದಪಟ್ಟಂತೆ ಮುಳಿಯಾರು ನಿವಾಸಿ ಶೇಖ್  ಆರೀಫ್ ಎಂಬಾತನನ್ನು ಬಂಧಿಸಲಾಗಿದೆ. ನಿನ್ನೆ (ಶುಕ್ರವಾರ) ಸಾಯಂಕಾಲ 3 ಗಂಟೆಯ ವೇಳೆ ಎಕ್ಸ್ಪ್ರೆಸ್ ತಂಡ ಹಾಗೂ ಕೆಮು ಸಿಬಂದಿಗಳು ನಡೆಸಿದ ವಾಹನ ತಪಾಸಣೆ ವೇಳೆ ದಾಖಲೆಗಳಿಲ್ಲದ ಹಣ ವಶಪಡಿಸಲಾಗಿದೆ. ಅನಂತರ ಪ್ರಕರಣವನ್ನು ಮಂಜೇಶ್ವರ ಪೊಲೀಸರಿಗೆ ಹಸ್ತಾಂತರಿಸಲಾಯಿತು. ಎಕ್ಸ್ಪ್ರೆಸ್ ಇನ್ಸ್ಪೆಕ್ಟರ್ ಜಿ.ಆದರ್ಶ್ ನೇತೃತ್ವದಲ್ಲಿ ನಡೆದ ಕಾರ್ಯಾಚರಣೆಯಲ್ಲಿ  ಇತರ ಅಧಿಕಾರಿಗಳಾದ ಎಂ.ವಿ.ಜಿಜಿನ್, ಸುಬಿನ್,ಪಿಲಿಪ್, ಸನಲ್ ಕುಮಾರ್, ಮೊಯ್ದೀನ್ ಸಾದಿಕ್, ವಿ.ಪ್ರಶಾಂತ್ ಕುಮಾರ್, ಟಿ.ರಾಹುಲ್ ಮೊದಲಾದವರು  ಭಾಗವಹಿಸಿದರು.

Post a Comment

0 Comments