Ticker

6/recent/ticker-posts

ಕುರುಡಪದವು ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಪರಿಸರ ದಿನಾಚರಣೆ



ಕುರುಡಪದವು: ಹಿರಿಯ ಪ್ರಾಥಮಿಕ ಶಾಲೆ ಕುರುಡಪದವಿನಲ್ಲಿ  ಪರಿಸರ ದಿನಾಚರಣೆಯನ್ನು ವಿವಿಧ ಕಾರ್ಯಕ್ರಮಗಳೊಂದಿಗೆ ಆಚರಿಸಲಾಯಿತು.ಶಾಲಾ ಅಸೆಂಬ್ಲಿಯಲ್ಲಿ  ಶಾಲಾ ಮುಖ್ಯೋಪಾಧ್ಯಾಯರು ಮಕ್ಕಳಿಗೆ ಗಿಡ ನೀಡುವುದರೊಂದಿಗೆ ದಿನದ ಮಹತ್ವವನ್ನು  ವಿವರಿಸಿದರು. ಪರಿಸರ ದಿನಾಚರಣೆಯ ಪ್ರತಿಜ್ಞೆಯನ್ನು ಶಾಲಾ ಅಧ್ಯಾಪಕರಾದ ಪ್ರಶಾಂತ್ ಕುಮಾರ್ ಸರ್ ಮಕ್ಕಳಿಗೆ ತಿಳಿಸಿಕೊಟ್ಟರು.ಪರಿಸರ ದಿನದ ಘೋಷಣೆಯನ್ನು  ಹೇಳುತ್ತಾ, ಮಕ್ಕಳೆಲ್ಲ ಕುರುಡಪದವು ಪರಿಸರದೆಲ್ಲೆಡೆ ಪರಿಸರ ದಿನದ ಮಹತ್ವವನ್ನು ಸಾರಿ ಹೇಳುವ ರಾಲಿಯಲ್ಲಿ ಭಾಗಿಯಾದರು.ಶಾಲಾ ಮುಖ್ಯೋಪಾಧ್ಯಾಯರು ಸೇರಿ, ಅಧ್ಯಾಪಕರಾದ ಗಿರೀಶ್ ಸರ್, ಸತೀಶ್ ಸುವರ್ಣ, ಅಬ್ದು ರಹೀಂ,ಯಶಸ್ ಮತ್ತು ಅಧ್ಯಾಪಿಕೆಯರಾದ ಹರ್ಷಿತಾ, ಪ್ರಮೀಳಾ, ಅರ್ಚನಾ, ಮೋಹಿನಿ ಟೀಚರ್ ಸೇರಿ ರಾಲಿಗೆ ನೇತೃತ್ವ ನೀಡಿದರು.ನಂತರ ಪರಿಸರ ದಿನದ ಮಹತ್ವವನ್ನು ತಿಳಿಸುವ ವೀಡಿಯೋ ಪ್ರದರ್ಶನ ನಡೆಸಲಾಯಿತು.ಸಂಜೆ ಶಾಲಾ ಮೈದಾನದಲ್ಲಿ  ಗಿಡ ನೆಡಲಾಯಿತು.

Post a Comment

0 Comments