Ticker

6/recent/ticker-posts

ರಾಜ್ಯದಲ್ಲಿ‌ ಮತ್ತೆ ಕಾಡಾನೆ ದಾಳಿ, ಓರ್ವ ಮೃತ್ಯು


 ರಾಜ್ಯದಲ್ಲಿ ಕಾಡಾನೆಯ ದಾಳಿಯಿಂದ ಓರ್ವ ಮೃತಪಟ್ಟ ಘಟನೆ ಪಾಲಕ್ಕಾಡ್ ನಲ್ಲಿ ನಡೆದಿದೆ. ಪಾಲಕ್ಕಾಡ್, ಮುಂಡೂರು‌ನಿವಾಸಿ‌ ಕುಮಾರನ್(61) ಮೃತಪಟ್ಟ ವ್ಯಕ್ತಿ. ಇಂದು (ಗುರುವಾರ) ಮುಂಜಾನೆ 3 ಗಂಟೆಯ ವೇಳೆ ಈ ದಾರುಣ ಘಟನೆ ನಡೆದಿದೆ. ಮನೆಯ ಬಳಿ ಬಂದ ಕಾಡಾನೆಯನ್ನು ಓಡಿಸಲು ಯತ್ನಿಸುವ ಮಧ್ಯೆ ಅದು ಕುಮಾರನ್ ಮೇಲೆ ದಾಳಿ ನಡೆಸಿದೆ. ಕುಮಾರನ್ ಸ್ಥಳಲ್ಲಿಯೇ ಮೃತಪಟ್ಟಿದ್ದಾರೆ. ಕಾಡಾನೆ ದಾಳಿಯಿಂದ ಓರ್ವ‌ ಮೃತಪಟ್ಟಿರುವ ಘಟನೆ ಮುಂಡೂರು ಪರಿಸರದಲ್ಲಿ ಆತಂಕಕ್ಕೆ‌ಕಾರಣವಾಗಿದೆ.

Post a Comment

0 Comments