ಕುಬಣೂರು: ಎನ್ಆರ್ ಎಯುಪಿ ಶಾಲೆಯಲ್ಲಿ ವಾಚನಾ ವಾರಾಚರಣೆಯ ಸಮಾರೋಪ ಸಮಾರಂಭ ಜರಗಿತು. ಕಾರ್ಯಕ್ರಮದ ಮುಖ್ಯ ಅತಿಥಿಗಳಾದ ಜನಪದ ಕಲಾವಿದ, ಬರಹಗಾರ ಎನ್ ಡಿ ಪಿ ಎ ಎಚ್ ಎಸ್ ಎಸ್ ಶಾಲಾ ಅಧ್ಯಾಪಕ ಶ್ರೀಸುಜಿತ್ ಕುಮಾರ್ ಉದ್ಘಾಟಿಸಿದರು. ಅವರು ಮಾತನಾಡುತ್ತಾ ಓದಿನಲ್ಲಿ ಮುಂದೆ ಬರಲು ತಾನು ಕಲಿತ ನಮ್ಮೀ ಸಂಸ್ಥೆಯೇ ಪ್ರೇರಣೆಯನ್ನು ಕೊಟ್ಟಿದೆ ಎಂಬುದರ ಮೂಲಕ ಓದಿನ ಮಹತ್ವದ ಕುರಿತು ಮಾತುಗಳನ್ನು ಹೇಳಿದರು. ನಂತರ ಮಕ್ಕಳೊಂದಿಗೆ ಸಂವಾದ ಹಾಗು ಅಭಿನಯ ಗೀತೆಯೊಂದಿಗೆ ಮಕ್ಕಳನ್ನು ಮನರಂಜಿಸಿದರು. ವಿವಿಧ ತರಗತಿಯ ಮಕ್ಕಳ ಪ್ರತಿಭಾ ಕಾರ್ಯಕ್ರಮಗಳು ವೇದಿಕೆಯಲ್ಲಿ ಜರಗಿತು.
ಕಾರ್ಯಕ್ರಮದಲ್ಲಿ ಈ ಶೈಕ್ಷಣಿಕ ವರ್ಷದ ಹಲವು ಚಟುವಟಿಕೆಗಳ ಯೋಜನೆ ಹಾಗು ಮಕ್ಕಳೇ ತಯಾರಿಸಿದ ಚಿಣ್ಣರ ಕಲರವ ಹಾಗು ಸೃಷ್ಟಿಮಂದಾರ ಹಸ್ತ ಪತ್ರಿಕೆಗಳು ಅನಾವರಣಗೊಂಡಿತು.ಓದುವ ವಾರಾಚರಣೆಯ ಅಂಗವಾಗಿ ಹಮ್ಮಿ ಕೊಂಡಿದ್ದ ವಿವಿಧ ಬರವಣಿಗೆ ಸಂಬಂಧಿ ಸ್ಪರ್ಧಾ ವಿಜೇತರಿಗೆ ಬಹುಮಾನಗಳನ್ನು ವಿತರಿಸಲಾಯಿತು ವೇದಿಕೆಯಲ್ಲಿ ಶಾಲಾ ಮಾತೃಸಂಘದ ಅಧ್ಯಕ್ಷೆ ಶ್ರೀಮತಿ ಅನಿತಾ ರವೀಂದ್ರ ಮೋಹನ್, ಹಿರಿಯ ಅಧ್ಯಾಪಕರುಗಳಾದ ಶ್ರೀ ಯಹ್ಯಖಾನ್ ಮಾಸ್ತರ್, ಶ್ರೀಮತಿ ಸ್ವಪ್ಟ ಟೇಚರ್ ಉಪಸ್ಥಿತರಿದ್ದರು, ಶಾಲಾ ಮುಖ್ಯೋಪಾಧ್ಯಾಯಿನಿ ಶ್ರೀಮತಿ ಮೀರಾ ಟೀಚರ್ ಸ್ವಾಗತಿಸಿ ಅಧ್ಯಾಪಕ ಗಿರಿರಾಜ್ ವಂದಿಸಿದರು ನಿಶಿತಾ ಮತ್ತು ತಂಡ ಪ್ರಾರ್ಥನೆ ಹಾಡಿ ವಿಜೇತ ಟೀಚರ್ ಕಾರ್ಯಕ್ರಮ ನಿರೂಪಿಸಿದರು.
0 Comments