Ticker

6/recent/ticker-posts

ಶೃಂಗೇರಿ ಕನ್ನಡ ಭವನಕ್ಕೆ ರಾಷ್ಟ್ರಕವಿ ಗೋವಿಂದ ಪೈ,ನಾಡೋಜ ಕಯ್ಯಾರರ ಭಾವಚಿತ್ರ ಕೊಡುಗೆ


ಬದಿಯಡ್ಕ :  ಕನ್ನಡ ಸಾರಸ್ವತ ಕಾರ್ಯಕ್ರಮಗಳ ಮೂಲಕ ಪ್ರಸಿದ್ಧಿಯಾಗಿರುವ ಶೃಂಗೇರಿ ಕನ್ನಡ ಭವನಕ್ಕೆ ಕಾಸರಗೋಡಿನ  ಕೊಡುಗೆಯಾಗಿ ಎರಡು ಸಾಹಿತ್ಯ ದಿಗ್ಗಜರ ಭಾವಚಿತ್ರ ಸಮರ್ಪಿಸಲ್ಪಡುತ್ತಿದೆ. ಇತ್ತಿಚೆಗೆ ಶೃಂಗೇರಿಯಲ್ಲಿ ಸವಿಹೃದಯದ ಕವಿಮಿತ್ರರು ನೇತೃತ್ವದಲ್ಲಿ ಸಾಹಿತ್ಯ ದರ್ಶನ ನಡೆಸಲಾಗಿತ್ತು ಈ ಸಂದರ್ಭ ಕಾಸರಗೋಡಿನ ಸುಮಾರು ನೂರರಷ್ಟು ಸಾಹಿತ್ಯಸಕ್ತರು ಕನ್ನಡ ಭವನಕ್ಕೆ ಭೇಟಿ ನೀಡಿದ್ದು ಅಲ್ಲಿ ಕರ್ನಾಟಕದ ಪ್ರಸಿದ್ಧ ಕವಿಗಳ ಸಾಲಿನಲ್ಲಿ ಸೇರಿರುವ ರಾಷ್ಟ್ರಕವಿ ಗೋವಿಂದ ಪೈ,ನಾಡೋಜ ಕಯ್ಯಾರ  ಕಿಂಞಿಣ್ಣ ರೈ ಮತ್ತು ಗೋವಿಂದ ಪೈಯವರ ಭಾವಚಿತ್ರದ ಅಭಾವ ಮನಗಂಡು ನಿವೃತ್ತ ಗ್ರಾಮಾಧಿಕಾರಿ ಬೇಳ ನಿವಾಸಿಯಾದ ಕೃಷ್ಣ ದರ್ಬೆತ್ತಡ್ಕ ಅವರು  ಸವಿಹೃದಯದ ಕವಿಮಿತ್ರರು ವೇದಿಕೆ ಮೂಲಕ ಈ ಎರಡು ಕವಿಗಳ ಭಾವಚಿತ್ರವನ್ನು ನೀಡಲು ನಿರ್ದೇಶಿಸಿದರು‌ ಇದರಂತೆ  ಸಂಚಾಲಕ ಸುಭಾಷ್ ಪೆರ್ಲ ಇವರಿಗೆ ಕೃಷ್ಣ ದರ್ಬೆತ್ತಡ್ಕ ಅವರು ಭಾವಚಿತ್ರಗಳನ್ನು ಹಸ್ತಾಂತರಿಸಿದರು.ಈ ಸಂದರ್ಭ ಪತ್ರಕರ್ತ ಸಾಹಿತಿ ರಾಧಾಕೃಷ್ಣ ಉಳಿಯತ್ತಡ್ಕ, ಕವಿ ಸುಂದರ ಬಾರಡ್ಕ, ಸಂಘಟಕ ರಾಮ ಪಟ್ಟಾಜೆ ಉಪಸ್ಥಿತರಿದ್ದರು.

Post a Comment

0 Comments