ಮಂಜೇಶ್ವರ ಗ್ರಂಥಾಲಯ ಕೌನ್ಸಿಲ್ ನೇತೃತ್ವದಲ್ಲಿ ನವಯುವಕ ಕಲಾವೃಂದ ಗ್ರಂಥಾಲಯ ಕುಳೂರ್ ಚಿನಾಲದಲ್ಲಿ ನಡೆದ ವಾಚನ ಕಲರಿ ಭಾಷಾ ಕಲಿಕಾ ಕೇಂದ್ರದ ಉದ್ಘಾಟನೆಯನ್ನು ರಾಜ್ಯ ಲೈಬ್ರರಿ ಕೌನ್ಸಿಲ್ ಸದಸ್ಯರಾದ ಪಿ.ಕೆ ಅಹ್ಮದ್ ಹುಸೈನ್ ಮಾಸ್ಟರ್ ರವರು ನೆರವೇರಿಸಿ ಮಾತನಾಡಿದರು. ಮೀಂಜ ಗ್ರಾಮ ಪಂಚಾಯತ್ ಆರೋಗ್ಯ ಮತ್ತು ವಿದ್ಯಾಭ್ಯಾಸ ಸ್ಥಾಯಿ ಸಮಿತಿ ಅಧ್ಯಕ್ಷೆಯವರಾದ ಶ್ರೀಮತಿ ಸರಸ್ವತಿಯವರು ಅಧ್ಯಕ್ಷತೆ ವಹಿಸಿದ್ದರು. ಮಂಜೇಶ್ವರ ತಾಲೂಕು ಕೌನ್ಸಿಲ್ ಕಾರ್ಯದರ್ಶಿಯವರಾದ ಡಿ.ಕಮಲಾಕ್ಷ ರವರು ವಾಯನ ವಸಂತದ ಕಾರ್ಡ್ ಮತ್ತು ಬ್ಯಾಗನ್ನು ಗ್ರಂಥ ಪಾಲಕಿಗೆ ವಿತರಿಸಿದರು ಹಾಗೂ ಈ ಕಾರ್ಯಕ್ರಮದಲ್ಲಿ ಜಿಲ್ಲಾ ಕೌನ್ಸಿಲ್ ಸದಸ್ಯರಾದ ಶ್ರೀಮತಿ ಮೀನಾಕ್ಷಿ ಬೊಡ್ಡೋಡಿ ಹಾಗೂ ಶ್ರೀ ಮೋನಪ್ಪ ಪೂಜಾರಿ ಮೊದಲಾದವರು ಮಾತನಾಡಿದರು. ಶ್ರೀಮತಿ ನಸೀಮಾ ಮಲಯಾಳಂ ತರಗತಿ ನಡೆಸಿದರು.
SSLC ಪರೀಕ್ಷೆಯಲ್ಲಿ ಉನ್ನತ ಅಂಕಗಳೊಂದಿಗೆ ತೇರ್ಗಡೆಯಾದ ಮಕ್ಕಳಿಗೆ ಲೈಬ್ರರಿ ವತಿಯಿಂದ ಗೌರವಿಸಲಾಯಿತು.ಗ್ರಂಥಾಲಯ ಕಾರ್ಯದರ್ಶಿ ಸಂದೀಪ್. ಕೆ ಸ್ವಾಗತಿಸಿ ಕೌನ್ಸಿಲ್ ಸದಸ್ಯರಾದ ಉದಯ C.H ವಂದಿಸಿದರು.
0 Comments