ಗೆಳೆಯನ ತಂದೆಯ ಪ್ರಾಣ ಉಳಿಸಲು ರಕ್ತದಾನ ಮಾಡಿ ಹೊರಬಂದ ಯುವಕ ಹೃದಯಾಘಾತದಿಂದ ಮೃತಪಟ್ಟ ಘಟನೆ ನಡೆದಿದೆ. ಪುನಲೂರು ಮಣಿಯಾರ್ ಪರವಟ್ಟಂ ಮನೋಹರನ್- ಶ್ಯಾಮಲ ದಂಪತಿಯ ಪುತ್ರ ಮಹೇಶ್(36) ಮೃತಪಟ್ಟ ಯುವಕ. ನಿನ್ನೆ (ಸೋಮವಾರ) ಮದ್ಯಾಹ್ನ ಪುನಲೂರು ತಾಲೂಕು ಆಸ್ಪತ್ರೆಯಲ್ಲಿ ಈ ಘಟನೆ ನಡೆದಿದೆ.
ಗೆಳೆಯನ ತಂದೆ ಇದೇ ಆಸ್ಪತ್ರೆಯಲ್ಲಿ ತೀವ್ರ ನಿಗಾ ವಿಭಾಗದಲ್ಲಿದ್ದು ಅವರಿಗೆ ರಕ್ತ ನೀಡಲು ಮಹೇಶ್ ಅಸಗಮಿಸಿದ್ದರು. ರಕ್ತದಾನದ ಮೊದಲು ರಕ್ತದೊತ್ತಡ, ಪಲ್ಸ್ ಎಂಬಿವುಗಳ ಪರಿಶೋಧನೆ ನಡೆದಿತ್ತು. ಅನಂತರ ರಕ್ತದಾನ ನಡೆಯಿತು. ಅನಂತರ ಜ್ಯೂಸ್ ಕುಡಿಯಲಾಯಿತು. ಇದರ ನಂತರ ಮಹೇಶನಿಗೆ ಎದೆ ನೋವು ಕಾಣಿಸಿಕೊಂಡಿದ್ದು ಕೂಡಲೇ ಡಾಕ್ಟರನ್ನು ಕಂಡು ಇಸಿಜಿ ನೋಡಿದಾಗ ವ್ಯತ್ಯಾಸ ಗಮನಕ್ಕೆ ಬಂತು. ಕೂಡಲೇ ತೀವ್ರ ನಿಗಾ ವಿಭಾಗದಲ್ಲಿ ದಾಖಲಿಸಲಾಯಿತು. ಕೆಲವೇ ಕ್ಷಣಗಳಲ್ಲಿ ಮಹೇಶ್ ಕೊನೆಯುಸಿರೆಳೆದರು. ಮೃತರು ಪತ್ನಿ ಸುಜಿತ, ಮಕ್ಕಳಾದ ಅಭಿನವ್, ಅರ್ಪಿತ,ಐಶ್ವರ್ಯ ಎಂಬಿವರನ್ನು ಅಗಲಿದ್ದಾರೆ
0 Comments