ಬದಿಯಡ್ಕ: ಆಗಲ್ಪಾಡಿ ಶ್ರೀ ಅನ್ನಪೂರ್ಣೇಶ್ವರಿ ಶಾಲೆಯ ಹೈಯರ್ ಸೆಕೆಂಡರಿ ವಿಭಾಗದ ಪ್ರಯೋಗ ಶಾಲೆ ಸಹಾಯಕ, ಉಬ್ರಂಗಳ ಸೀತಾಂಗುಳಿ ನಿವಾಸಿ ಶ್ರೀ ಬಾಲಕೃಷ್ಣ ಎಸ್ (48) ನಿಧನರಾಗಿದ್ದಾರೆ. ಇವರು 1999 ನೇ ಇಸವಿಯಲ್ಲಿ ಪ್ರೌಢಶಾಲೆಯಲ್ಲಿ F.T.M. ಆಗಿ ಸೇವೆಯನ್ನು ಪ್ರಾರಂಭಿಸಿದ್ದರು. 2013ನೇ ಇಸವಿಯಲ್ಲಿ Office Attender ಆಗಿ ಭಡ್ತಿ ಹೊಂದಿದ್ದರು. ಅನಂತರ 2021ರಲ್ಲಿ ಹೈಯರ್ ಸೆಕೆಂಡರಿ ಸೆಕ್ಷನ್ ನ ಪ್ರಯೋಗ ಶಾಲೆ ಸಹಾಯಕರಾಗಿ ವರ್ಗಾವಣೆಗೊಂಡು, ಸೇವಾ ನಿರತರಾಗಿದ್ದರು ಹಾಗೂ ಶಾಲೆಯ ಎಲ್ಲಾ ಕೆಲಸ ಕಾರ್ಯಗಳಲ್ಲಿ ಸಕ್ರಿಯರಾಗಿದ್ದರು. ಬದಿಯಡ್ಕ ಪೊಲೀಸರು ಕೇಸು ದಾಖಲಿಸಿದರು.
ಮೃತರು ಮಹಾಲಿಂಗ ಮಣಿಯಾಣಿ- ಕುಸುಮ ದಂಪತಿಯ ಪುತ್ರ. ಪತ್ನಿ ಶೀಲ, ಸಹೋದರ ಸಹೋದರಿಯರಾದ ರವೀಂದ್ರ, ಶ್ರೀದೇವಿ, ಸುಮನ, ಪೂರ್ಣಿಮ,ಶಾಂತ, ದೀಪಿಕ ಹಾಗೂ ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ.
0 Comments