Ticker

6/recent/ticker-posts

ವಾಹನಗಳಿಗೆ ಅಪಾಯ ಸೃಷ್ಟಿಸುತ್ತಿರುವ ರಾಜ್ಯ ಹೆದ್ದಾರಿ ಬದಿಯ ಮರಗಳು


 ಉಕ್ಕಿನಡ್ಕ: ರಸ್ತೆ ಬದಿಯಲ್ಲಿ ಆಳೆತ್ತರಕ್ಕೆ ಬೆಳೆದು ನಿಂತಿರುವ ಅಕೇಶಿಯ ಮರಗಳು ರಾಜ್ಯ ಹೆದ್ದಾರಿಯಲ್ಲಿ ಸಾಗುವ ವಾಹನಗಳಿಗೆ ಮರಣ ಘಂಟೆಯಾಗಿ ಪರಿಣಮಿಸಿದೆ‌ ಈ ವರ್ಷದ ಮಳೆಗಾಲದಲ್ಲಿ ಬಿರುಸಿನ ಮಳೆಯ ಜತೆಗೆ  ಬಲವಾದ ಗಾಳಿಯೂ ಬೀಸುತ್ತಿದ್ದು  ಮರಗಳು ನೇರ ರಸ್ತೆಗೆ ಬೀಳುತ್ತಿವೆ.  ಕೆಲವೊಮ್ಮೆ ಇವು ರಸ್ತೆಗೇ ಬೀಳುತ್ತಿದ್ದರೆ ಇನ್ನು ಕೆಲವೊಮ್ಮೆ ವಿದ್ಯುತ್ ತಂತಿಯಲ್ಲಿ ಸಿಲುಕಿ ನೇತಾಡಿಕೊಂಡಿರುತ್ತದೆ.

ಇದರಿಂದಾಗಿ ವಾಹನ ಸಂಚಾರಕ್ಕೆ ಅಡಚಣೆ ಉಂಟಾಗುತ್ತಿದೆ‌. ಉಕ್ಕಿನಡ್ಕ- ಬದಿಯಡ್ಕ ರಸ್ತೆಯಲ್ಲಿ ಇದು ನಿತ್ಯ ಘಟನೆಯಾಗಿದೆ.

   ಹತ್ತು ದಿನಗಳ ಹಿಂದೆ ಇದೇ ರಸ್ತೆಯ ಗೋಳಿಯಡಿ ಎಂಬಲ್ಲಿ ಮರ ರಸ್ತೆಗೆ ಬಿದ್ದು ಸುಮಾರು ಒಂದು ಗಂಟೆಗಳ ಕಾಲ ವಾಹನ ಸಂಚಾರ ಸ್ಥಗಿತಗೊಂಡಿತ್ತು. ತುರ್ತು ವಾಹನಗಳು ಮಾತ್ರ ಗೋಳಿಯಡಿ- ಕೋರಿಕ್ಕಾರು ಮೂಲಕ ಸಾಗಿತ್ತು. ಇಂದು (ಆದಿತ್ಯವಾರ ) ಪುನಃ ಮರ ಬಿದ್ದು ವಿದ್ಯುತ್ ತಂತಿಯಲ್ಲಿ ನೇತಾಡತೊಡಗಿದ್ದು ವಾಹನಗಳು ಕಷ್ಟ ಪಟ್ಟು ಸಾಗಬೇಕಾದ ಸ್ಥಿತಿಯಾಗಿದೆ‌ 



   ಒಂದು ಕಾಲದಲ್ಲಿ ರಸ್ತೆ ಬದಿಯಲ್ಲಿ ಅಲಂಕಾರಕ್ಕಾಗಿ ಹಾಗೂ ಹಸಿರಾಗಿಸಲು ಈ ಮರಗಳನ್ನು ನೆಡಲಾಗಿತ್ತು. ಆದರೆ ರಸ್ತೆಯ ಒಂದು ಭಾಗ ಎತ್ತರವಾದ ಕಾರಣ ಅಲ್ಲಿ ನೆಡುವ ಮರಗಳು ಬೆಳೆದು ದೊಡ್ಡದಾಗಿ ಇದೀಗ ರಸ್ತೆಗೇ ವಾಲಿ ನಿಂತಿದೆ. ಲೋಕೋಪಯೋಗಿ ಇಲಾಖೆ ಈ ಬಗ್ಗೆ ಪರಿಶೋಧಿಸಿ ಅಗತ್ಯದ ಕ್ರಮ ಕೈಗೊಳ್ಳಬೇಕು ಎಂದು ನಾಗರಿಕರು ಒತ್ತಾತಿಸಿದ್ದಾರೆ

Post a Comment

0 Comments