Ticker

6/recent/ticker-posts

ಜಿಲ್ಲೆಯ ಹಿರಿಯ ಮಲಯಾಳಂ ಪತ್ರಕರ್ತ ಕೆ.ಎಸ್.ಗೋಪಾಲಕೃಷ್ಣನ್ ನಿಧನ


 ಕಾಸರಗೋಡು: ಜಿಲ್ಲೆಯ ಹಿರಿಯ ಮಲಯಾಳಂ ಪತ್ರಕರ್ತ ಕೆ.ಎಸ್.ಗೋಪಾಲಕೃಷ್ಣನ್ (65) ನಿಧನರಾದರು. ಅಲ್ಪ ಕಾಲದ ಅಸೌಖ್ಯದಿಂದ ಬಳಲುತ್ತಿದ್ದ ಅವರನ್ನು ಪೆರಿಯಾರಂ ಮೆಡಿಕಲ್ ಕಾಲೇಜಿನಲ್ಲಿ ದಾಖಲಿಸಲಾಗಿತ್ತು. ಅನಂತರ ಎರಡು ದಿನಗಳ ಹಿಂದೆ ಮನೆಗೆ ತಂದಿದ್ದು ಇಂದು (ಶನಿವಾರ) ಮುಂಜಾನೆ ಮನೆಯಲ್ಲಿ ಅವರು ಕೊನೆಯುಸಿರೆಳೆದರು.

   ದೇಶಾಭಿಮಾನಿ, ಲೇಟೆಸ್ಟ್ ಪತ್ರಿಕೆಗಳಲ್ಲಿ ವರದಿಗಾರರಾಗಿದ್ದ ಅವರು ಹಲವು ತನಿಖಾತ್ಮಕ ಲೇಖನಗಳನ್ನು ಬರೆದು ಹೆಸರುವಾಸಿಯಾಗಿದ್ದರು. ಮೃತರು ಪತ್ನಿ ಶ್ಯಾಮಲ, ಮಕ್ಕಳಾದ ಆನಂದಕೃಷ್ಣನ್, ಅಭಿಲಾಷ್ ಎಂಬುವರನ್ನು ಅಗಲಿದ್ದಾರೆ.

Post a Comment

0 Comments