Ticker

6/recent/ticker-posts

ಗಾಡಿಗುಡ್ಡೆ ಭಾರತಾಂಬ ಆರ್ಟ್ಸ್ & ಸ್ಪೋರ್ಟ್ಸ್ ಕ್ಲಬ್ ನಿಂದ ಎಸ್ಸಸ್ಸೆಲ್ಸಿ ಪ್ಲಸ್ ಟು ವಿಜಯಿಗಳಿಗೆ ಅಭಿನಂದನೆ


 ಮುಳ್ಳೇರಿಯ : ಭಾರತಾಂಬ ಆರ್ಟ್ಸ್ & ಸ್ಪೋರ್ಟ್ಸ್ ಕ್ಲಬ್ ಗಾಡಿಗುಡ್ಡೆ ಇದರ ವತಿಯಿಂದ ಎಸ್ ಎಸ್ ಎಲ್ ಸಿ ಮತ್ತು ಪ್ಲಸ್ ಟವಿನಲ್ಲಿ ಉನ್ನತ ವಿಜಯ ಗಳಿಸಿದ ವಿದ್ಯಾರ್ಥಿಗಳಿಗೆ ಅಭಿನಂದನೆ ಕಾರ್ಯಕ್ರಮ ನಡೆಯಿತು. ಎಂ  ಸಂಜೀವ ಶೆಟ್ಟಿ ಮೊಟ್ಟಕುಂಜ ಕಾರ್ಯಕ್ರಮ ಉದ್ಘಾಟಿಸಿದರು. ಅಧ್ಯಕ್ಷತೆಯನ್ನು ರಮೇಶ್ ಯಾದವ್ ವಹಿಸಿದರು. ಮುಖ್ಯ ಅತಿಥಿಗಳಾಗಿ ಸುಧೀರ್ ಕುಮಾರ್ ರೈ ನಿವೃತ್ತ ಮುಖ್ಯೋಪಾಧ್ಯಾಯರು, ಯಶೋಧಾ.ಎನ್ ಕಾರಡ್ಕ ಬ್ಲೋಕ್ ಪಂಚಾಯತ್ ಮೆಂಬರ್, ಯತೀಶ್ ಕುಮಾರ್ ರೈ ನಿವೃತ್ತ ಎ ಇ ಓ ಕುಂಬಳೆ, ಸಂತೋಷ್ ಕುಮಾರ್ ರೈ ಗಾಡಿಗುಡ್ಡೆ ವಿಶ್ವ ಹಿಂದೂ ಪರಿಷತ್ತಿನ ಅಧ್ಯಕ್ಷರು, ಕುಂಬಡಾಜೆ , ಗಣೇಶ್ ಪ್ರಸಾದ್ ಸಬ್ರುಕಜೆ, ಮೊದಲಾದವರು ಶುಭಕೋರಿದರು. ಕ್ಲಬ್ಬಿನ  ಕಾರ್ಯದರ್ಶಿ ಸುಮಿತ್ ರೈ ಸ್ವಾಗತಿಸಿ, ಸುಜಿತ್ ಕುಮಾರ್ ರೈ ವಂದಿಸಿದರು. ರಾಜೇಶ್ ಶೆಟ್ಟಿ ಬಳೆಕ್ಕಳ ಕಾರ್ಯಕ್ರಮ ನಿರೂಪಿಸಿದರು.

Post a Comment

0 Comments