ಅಡೂರು: ಇಲ್ಲಿನ ಚಂದನಕ್ಕಾಡ್ ನಿವಾಸಿ ದೈವ ನರ್ತಕ ಸತೀಶನ್ ಯಾನೆ ಬಿಜು(46) ವಿನ ನಿಗೂಡ ಸಾವು ಕೊಲೆಯೆಂದು ಸಾಬೀತಾಗಿದೆ. ಇದರಂತೆ ಸತೀಶನ ಗೆಳೆಯ ಚಿದಾನಂದ ಎಂಬಾತನನ್ನು ಆದೂರು ಪೊಲೀಸರು ಬಂಧಿಸಿದ್ದಾರೆ. ಇಂದು (ಗುರುವಾರ) ಈತನ ಬಂಧನ ನಡೆಯಲಿದೆ. ಮಂಗಳವಾರ ಸಾಯಂಕಾಲ ದೈವನರ್ತಕ ಸತೀಶ ಯಾನೆ ಬಿಜು ನೆರೆಮನೆಯ ಚೋಮನಾಯ್ಕ ಎಂಬವರ ಮನೆಯ ವರಾಂಡದಲ್ಲಿ ಪ್ರಜ್ಞಾಹೀನ ಸ್ಥಿತಿಯಲ್ಲಿ ಪತ್ತೆಯಾಗಿದ್ದರು. ಕೂಡಲೇ ಅವರನ್ನು ಕಾಸರಗೋಡು ಜನರಲ್ ಆಸ್ಪತ್ರೆಗೆ ತಲುಪಿಸಿದರೂ ಮೃತಪಟ್ಟಿದ್ದರು. ಅನಂತರ ಪೋಸ್ಟ್ ಮಾರ್ಟಂ ನಡೆಸಿದಾಗ ಮೃತದೇಹದಲ್ಲಿ ಆಂತರಿಕ ಗಾಯಗಳಿರುವುದು ತಿಳಿಯಿತು. ಕುತ್ತಿಗೆಯ ಎಲುಬು ಮುರಿದಿದ್ದು, ಬೆನ್ನಿನ ಭಾಗದಲ್ಲಿಯೂ ಆಂತರಿಕ ಗಾಯಗಳಾಗಿತ್ತು. ಈ ಬಗ್ಗೆ ಪೋಸ್ಟ್ ಮಾರ್ಟಂ ನಡೆಸಿದ ಡಾಕ್ಟರ್ ನೀಡಿದ ಹೇಳಿಕೆಯಂತೆ ಮೃತನ ಗೆಳೆಯ ಚಿದಾನಂದನನ್ನು ಪೊಲೀಸರು ವಶಕ್ಕೆ ತೆಗೆದಿಕೊಂಡಿದ್ದಾರೆ.
ಸೋಮವಾರ ಮದ್ಯಾಹ್ನ ಸತೀಶ, ಚಿದಾನಂದ ಚೋಮನಾಯ್ಕರ ಮನೆಯಲ್ಲಿ ಮದ್ಯ ಸೇವಿಸಿದ್ದರು.ಚೋಮ ನಾಯ್ಕರೂ ಜತೆ ಸೇರಿದ್ದರು. ಈ ವೇಳೆ ಸತೀಶ ಹಾಗೂ ಚಿದಾನಂದ ಮದ್ಯೆ ಮಾತು ಬೆಳೆದು ಜಗಳವಾಗಿತ್ತೆಂದೂ ಚಿದಾನಂದ ಅವರು ಸತೀಶರನ್ಬು ಕೆಳಕ್ಕೆ ದೂಡಿದ್ದರೆಂದೂ ಹೇಳಲಾಗುತ್ತಿದೆ. ಕೆಳಗೆ ಬಿದ್ದ ಸತೀಶರನ್ನು ಎತ್ತಿ ವರಾಂಡದಲ್ಲಿ ಮಲಗಿಸಿ ಚಿದಾನಂದ ಹೋದನೆನ್ನಲಾಗಿದೆ.
ಸತೀಶರ ಸಹೋದರಿ ಮಂಗಳವಾರದಂದು ಹುಡುಕಾಡುವ ವೇಳೆ ಸತೀಶ ಪ್ರಜ್ಞಾಹೀನ ಸ್ಥಿತಿಯಲ್ಲಿ ಪತ್ತೆಯಾಗಿದ್ದು ಕೂಡಲೇ ಆಸ್ಪತ್ರೆಗೆ ಕೊಂಡೊಯ್ದಾಗ ಮೃತಪಟ್ಟರೆಂದು ತಿಳಿಯಿತು. ಚಿದಾನಂದರ ಬಂಧನ ಇಂದು ನಡೆಯಲಿದೆ
0 Comments