Ticker

6/recent/ticker-posts

ಹಿರಿಯ ಬಿಜೆಪಿ ಕಾರ್ಯಕರ್ತ ಕೂಡ್ಲು ಗೋಪಾಲ ಕೃಷ್ಣ ಶೆಟ್ಟಿ ನಿಧನ


 ಕಾಸರಗೋಡು: ಹಿರಿಯ ಬಿಜೆಪಿ ಮುಖಂಡರಾಗಿದ್ದ  ಕೂಡ್ಲು ಗೋಪಾಲ ಕೃಷ್ಣ ಶೆಟ್ಟಿ ಪಾಂಗ್ಲಾಯಿ (77) ಇವರು ಇಂದು ಬೆಳಿಗ್ಗೆ ನಿಧನ ರಾಗಿದ್ದಾರೆ. ಇವರು ಹಲವು ವರ್ಷಗಳಿಂದ ನಗರದಲ್ಲಿ ಟೈಲರ್ ಕೆಲಸ ನಿರ್ವಹಿಸುತ್ತಿದ್ದರು. ಸಂಘ ಪರಿವಾರದ ಸಕ್ರಿಯ ಕಾರ್ಯಕರ್ತರಾದ ಅವರು ತುರ್ತು ಪರಿಸ್ಥಿತಿ ಹೋರಾಟಗಾರರಾಗಿದ್ದು ಜೈಲುವಾಸ ಅನುಭವಿಸಿದ್ದರು. ಮೃತರ ಪತ್ನಿ ಕಲ್ಯಾಣಿ ಈ ಹಿಂದೆಯೇ ನಿಧನರಾಗಿದ್ದರು. ಮೃತರು ಮಕ್ಕಳಾದ ಶರತ್, ಭರತ್, ಪ್ರತಾಪ್, ರೇಶ್ಮ ಹಾಗೂ ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ

Post a Comment

0 Comments